ಮುಡಿಪು: ಕೈರಂಗಳ ದುಗ್ಗಜ್ಜರಕಟ್ಟೆ ಸುಟ್ಟ ನಿವಾಸಿ ಹಾಜಿ ಉಮ್ಮರ್ ಸಿದ್ದೀಕ್ ಅವರ ಪುತ್ರ ಎನ್. ಎಸ್. ಶರೀಫ್ (47)ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾದರು.
ಕೈರಂಗಳ ತೋಟಾಲ್ ಜುಮ್ಮಾ ಮಸೀದಿಯಲ್ಲಿ ಶುಕ್ರವಾರದ ಜುಮಾ ಮುಗಿಸಿ ತುಂಬಾ ಸಂತಸದಲ್ಲಿದ್ದ ಅವರು ಹಠಾತ್ತನೇ ಕುಸಿದು ಬಿದ್ದು ಹೃದಯಾಘಾತದಿಂದ ನಿಧನರಾದರು.

ವೃತ್ತಿಯಲ್ಲಿ ಎಲೆಕ್ಟ್ರಿಕ್ ಸಾಧನಗಳನ್ನು ಸರ್ವಿಸ್ ಮಾಡುತ್ತಿದ್ದ ಶರೀಫ್ ಅವರು ಮನೆ ಸಮೀಪ ಸರ್ವಿಸ್ ಶಾಪ್ ಹೊಂದಿದ್ದರು.
ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಹೆಸರನ್ನು ಸಂಪಾದಿಸಿದ್ದ ಮೃತರಿಗೆ ಪತ್ನಿ, ಪುತ್ರ, ಪುತ್ರಿ, ತಂದೆ, ತಾಯಿ, ಮೂವರು ಸಹೋದರರು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.


