
ಮೂಡುಬಿದಿರೆ: ಸಾವ೯ಜನಿಕ ಶ್ರೀ ಶನ್ನೈಶ್ಚರ ಪೂಜಾ ಸಮಿತಿ ಟ್ರಸ್ಟ್ ಅಮನಬೆಟ್ಟು ಮಾನಾ೯ಡು ಇದರ ವತಿಯಿಂದ ಫೆ.7ರಂದು ನಡೆಯುವ ನಾಲ್ಕನೇ ವರ್ಷದ ಸಾರ್ವಜನಿಕ ಶನ್ನೈಶ್ಚರ ಪೂಜೆ ಯ ಆಮಂತ್ರಣ ಪತ್ರಿಕೆ ಬಿಡುಗಡೆಯು ಇತ್ತೀಚೆಗೆ ನಡೆಯಿತು.
ಪೂಜಾ ಸಮಿತಿಯ ಅಧ್ಯಕ್ಷರು ರಮೇಶ್ ಪಿ. ಶೆಟ್ಟಿ , ಗೌರವಾಧ್ಯಕ್ಷ ದಯಾನಂದ ಪೈ, ಕಾರ್ಯದರ್ಶಿ ಸುರೇಶ್ ಪೂಜಾರಿ, ಸಂಚಾಲಕ ಭವಿಷ್ಯತ್ ಕೋಟ್ಯಾನ್, ಪಂಚಾಯತ್ ಸದಸ್ಯ ರಮೇಶ್ ಶೆಟ್ಟಿ , ಮಹಿಳಾ ಸಂಚಾಲಕಿ ಶಶಿಕಲಾ ಗಿರೀಶ್ ಅಂಬಡೆ ಬೈಲು, ಹಾಗೂ ಸಾರ್ವಜನಿಕ ಶನಿಶ್ಚರ ಪೂಜಾ ಸಮಿತಿಯ ಎಲ್ಲಾ ಸದಸ್ಯರುಗಳು ಹಾಗೂ ಗ್ರಾಮಸ್ಥರು ಈ ಸಂದಭ೯ದಲ್ಲಿದ್ದರು.


