ಬಂಟ್ವಾಳ : ತಲ್ವಾರ್ ದಾಳಿ  ಸುಳ್ಳೆಂದು ಆರೋಪಿಸಿ ಬಂಧಿತನಾಗಿದ್ದ ಉಮ್ಮರ್ ಫಾರೂಕ್ ಸಜಿಪರವರಿಗೆ ಜಾಮೀನು ಮಂಜೂರು

Date:

ಮಂಗಳೂರು: ಸಜಿಪ ನಡು ಗ್ರಾಮ ನಿವಾಸಿ ಉಮ್ಮರ್ ಫಾರೂಕ್ ಎಂಬವರು ಜೂನ್ 6ರಂದು ಮುಂಜಾನೆ ನಂದಾವರದಿಂದ ದೇರಳಕಟ್ಟೆ ಕಡೆಗೆ ತೆರಳುತ್ತಿದ್ದಾಗ ಸಜೀಪನಡು ದೇರಾಜೆ ಬಸ್ ನಿಲ್ದಾಣದ ಬಳಿ ಇಬ್ಬರು ಅಪರಿಚಿತರು ತನ್ನ ಮೇಲೆ ತಲ್ವಾರ್ ಬೀಸಿ ತನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ತನಿಖೆ ನಡೆಸಿದ ಬಂಟ್ವಾಳ ಗ್ರಾಮಾಂತರ ಪೋಲಿಸರು ಇದೊಂದು ಸುಳ್ಳು ದೂರು ಎಂದು ಆರೋಪಿಸಿ ದೂರುದಾರನ ವಿರುದ್ದವೇ ಜಾಮೀನು ರಹಿತ ಪ್ರಕರಣ ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲು ಸೇರಿದ್ದರು.ಈ ಬಗ್ಗೆ ಉಮ್ಮರ್ ಫಾರೂಕ್ ರವರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಸಂಖ್ಯೆ 128/2025 ರಲ್ಲಿ ದೂರುದಾರ ಹಾಗೂ ಆರೋಪಿಯಾಗಿರುವ ಉಮ್ಮರ್ ಫಾರೂಕ್ ರವರಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿ ಆದೇಶ ನೀಡಿದೆ. ಉಮ್ಮರ್ ಫಾರೂಕ್ ರವರ ಪರವಾಗಿ ವಕೀಲರಾದ ಕಬೀರ್ ಕೆಮ್ಮಾರ ವಾದ ಮಂಡನೆ ಮಾಡಿದ್ದಾರೆ. ಇದೇ ಪ್ರಕರಣದಲ್ಲಿ ದೂರುದಾರನ ವಿರುದ್ಧವೇ ಷಡ್ಯಂತರ ನಡೆಸಿ ಬಂದಿಸಿದ್ದಾರೆಂದು ಆರೋಪಿಸಿ ಫೇಸ್‌ಬುಕ್‌ ಪೋಸ್ಟ್ ಮಾಡಿದ್ದ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ಹಾಗೂ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿಯ ವಿರುದ್ಧವೂ ಪೋಲಿಸರು ಪ್ರಕರಣ ದಾಖಲಿಸಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ವಸ್ತ್ರ ಮಳಿಗೆ, ಮದುವೆ ಸಭಾoಗಣದಿಂದ ಚಿನ್ನದ ಸರ ಕಳವು, ಉಳ್ಳಾಲ ಮೂಲದ ಮಹಿಳೆ ಬಂಧನ

ಉಳ್ಳಾಲ : ಉಳ್ಳಾಲ ಮೂಲದ ಮಿನ್ನತ್ ಎಂಬ ಮದುವೆ ಸಭಾಂಗಣ ಸೇರಿದಂತೆ...

ಉಡುಪಿ | ಮದುವೆಗೆ ನಿರಾಕರಣೆ: ಚೂರಿ ಇರಿತಕ್ಕೊಳಗಾಗಿದ್ದ ಯುವತಿ ಸಾವು

ಆರೋಪಿ‌ ಕಾರ್ತಿಕ್ ಪೂಜಾರಿ ಮೃತದೇಹ ಬಾವಿಯಲ್ಲಿ ಪತ್ತೆ ಉಡುಪಿ, ಸೆ.12: ಬ್ರಹ್ಮಾವರ ಪೊಲೀಸ್...

ಮಂಗಳೂರು: ರಾಣಿ ಅಬ್ಬಕ್ಕ@500 ಉಪನ್ಯಾಸ – 49 ಕಾರ್ಯಕ್ರಮ

ಉಳ್ಳಾಲ: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ ಮಂಗಳೂರು ವಿಭಾಗ ಹಾಗೂ...

ಮಂಗಳೂರು ವಿವಿ ಕುಲಪತಿಪ್ರೊ.ಪಿ.ಎಲ್ ಧರ್ಮ ಇಂಗ್ಲೆಂಡಿಗೆ ಪ್ರವಾಸ

ಮಂಗಳಗಂಗೋತ್ರಿ: ಬ್ರಿಟಿಶ್ ಕೌನ್ಸಿಲ್ ಲಂಡನ್ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ...