ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಸಾಮಾಜಿಕ ನ್ಯಾಯಕ್ಕಾಗಿ, ಎಸ್ಡಿಪಿಐ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ-3 ಡಿಸೆಂಬರ್ 13 ರಿಂದ 15 ರವರೆಗೆ ನಡೆಯಲಿದೆ.

2B ಮೀಸಲಾತಿ ಮರುಸ್ಥಾಪಿಸಿ 8%ಗೆ ಏರಿಸಿ, ವಿವಾದಾತ್ಮಕ ಎಸ್.ಐ.ಆರ್ ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲವೆಂದು ನಿರ್ಣಯ ಕೈಗೊಳ್ಳಿ, ಒಳ ಮೀಸಲಾತಿ ಗೊಂದಲ ಪರಿಹರಿಸಿ. ರೈತ ವಿರೋಧಿ ಜಾನುವಾರು ಪ್ರತಿಬಂಧಕ ಕಾನೂನನ್ನು ರದ್ದುಪಡಿಸಿ. ಖಾಲಿ ಹುದ್ದೆಗಳನ್ನು ಭರ್ತಿಗೊಳಿಸಿ ಮೊದಲಾದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಸ್ಡಿಪಿಐ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ ಹಮ್ಮಿಕೊಳ್ಳಲಾಗಿದೆ.


