
ಕುವೈತ್: ಡಿಕೆಯಸ್ಸಿ ಕುವೈತ್ ರಾಷ್ಟ್ರೀಯ ಸಮಿತಿ ಅಧೀನದಲ್ಲಿ ಜಹರ ಕಾರ್ಯಕರ್ತರನ್ನು ಒಳಗೊಂಡ ನೂತನ ಜಹರ ಯೂನಿಟ್ ಗೆ ಇಂದು ಸಯ್ಯದ್ ಅಹ್ಮದ್ ಮುಕ್ತಾರ್ ತಂಙಳ್ ಕುಂಬೋಲ್ ಅವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.
ಬೆಳಿಗ್ಗೆ ನಡೆದ ಸರಳ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಮಿತಿ ಗೌರವಾಧ್ಯಕ್ಷರಾದ ಶಫೀಕ್ ಆಹ್ಸನಿ ಸ್ವಾಗತ ಮಾಡಿ ಡಿಕೆಎಸ್ಸಿ ಬಗ್ಗೆ ವಿವರಣೆ ನೀಡಿದರು, ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಅಝೀಝ್ ಮೂಳೂರು ಸಂಘಟನೆ ಮಹತ್ವ ತಿಳಿಸಿದರು, ಕೇಂದ್ರ ಸಮಿತಿ ಸದಸ್ಯರಾದ ಅಬೂಬಕ್ಕರ್ ಬರ್ವ ಉಪಸ್ಥಿತರಿದ್ದರು.

ನೂತನ ಸಮಿತಿಯನ್ನು ಸಯ್ಯದ್ ಮುಖ್ತಾರ್ ತಂಙಳ್ ಕುಂಬೋಲ್ ರವರು ಘೋಷಿಸಿದರು, ಅಧ್ಯಕ್ಷರಾಗಿ ಇರ್ಶಾದ್ ಸಖಾಫಿ , ಪ್ರಧಾನ ಕಾರ್ಯದರ್ಶಿ ಯಾಗಿ ಮನ್ಸೂರ್ ಪರಪ್ಪು ಮತ್ತು ಹಣಕಾಸು ಕಾರ್ಯದರ್ಶಿ ಲತೀಫ್ ಅಗ್ರಹಾರ ಇವರನ್ನು ಆಯ್ಕೆ ಮಾಡಲಾಯಿತು. ಸಯ್ಯದ್ ಮುಖ್ತಾರ್ ತಂಙಳ್ ಕುಂಬೋಲ್ ಅವರ ನಸೀಹತ್ ಮತ್ತು ದುಆ ದಿಂದ ಸಭೆಯು ಧನ್ಯಗೊಂಡಿತ್ತು.


