
ಕುವೈತ್: ಡಿಕೆಎಸ್ಸಿ ಕುವೈತ್ ರಾಷ್ಟ್ರೀಯ ಸಮಿತಿ ಅಧೀನದಲ್ಲಿ ಫರ್ವಾನಿಯ ಕಾರ್ಯಕರ್ತರನ್ನು ಒಳಗೊಂಡ ನೂತನ ಫರ್ವಾನಿಯ ಯೂನಿಟ್ ಗೆ ಇಂದು ಸಯ್ಯದ್ ಅಹ್ಮದ್ ಮುಕ್ತಾರ್ ತಂಗಲ್ ಕುಂಬೋಲ್ ಅವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.
ಮಗ್ರಿಬ್ ಬಳಿಕ ನಡೆದ ಹ್ರಸ್ವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಲಿಯಾಕತ್ ಗಂಗಾವಳಿ ಸ್ವಾಗತ ಮಾಡಿ DKSC ಬಗ್ಗೆ ವಿವರಣೆ ನೀಡಿದರು,

ಸಯ್ಯದ್ ಮುಕ್ತಾರ್ ತಂಗಲ್ ನೂತನ ಸಮಿತಿಯನ್ನು ಘೋಷಿಸಿದರು, ಅಧ್ಯಕ್ಷರಾಗಿ ಮುಕ್ತಾರ್ ಗಂಗಾವಳಿ, ಪ್ರಧಾನ ಕಾರ್ಯದರ್ಶಿ ಯಾಗಿ ಆಸಿಫ್ ಸಾಗರ ಮತ್ತು ಹಣಕಾಸು ಕಾರ್ಯದರ್ಶಿ ಅನ್ವರ್ ಕೈಕಂಬ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾದ ಇಕ್ಬಾಲ್ ಕಾಸ್ಕೋ ಹಾಗೂ ಇಕ್ಬಾಲ್ ಎಡಪದವು ಉಪಸ್ಥಿತರಿದ್ದರು. ಸಯ್ಯದ್ ರವರ ನಸೀಹತ್ ಮತ್ತು ದುಆ ದಿಂದ ಸಭೆಯು ಧನ್ಯಗೊಂಡಿತ್ತು.
ನೂರೇ ಮದೀನಾ ಪ್ರೋಗ್ರಾಂ ಚೇರ್ಮನ್ ಯೂಸುಫ್ ಮುನಿಯಮ್ ವಂದಿಸಿದರು.
ಕೇಂದ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಮೂಳೂರು ಸಹಿತ ಕೇಂದ್ರ ಮತ್ತು ರಾಷ್ಟ್ರೀಯ ಸಮಿತಿ ನೇತಾರರು ಉಪಸ್ಥಿತರಿದ್ದರು.



