ಕೈಕಂಬ: ಕೈಕಂಬ ನಾಗರಿಕ ಹೋರಾಟ ಸಮಿತಿ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿಯನ್ನು ಭೇಟಿಯಾಗಿ, ಕೈಕಂಬದ ತಡೆಗೋಡೆ ಸಮಸ್ಯೆ ಸೇರಿದಂತೆ ಎಲ್ಲಾ ಸಂಬಂಧಿತ ಹೋರಾಟ ವಿಷಯಗಳನ್ನು ಚರ್ಚೆ ಮಾಡಿತು.

ಸಭೆಯಲ್ಲಿ, ಶಾಸಕರು ನಾಗರಿಕರ ಮನವಿಯನ್ನು ಗಮನಿಸಿ ಸ್ಥಳದಲ್ಲೇ ಸಂಸದರು (ಎಂಪಿ) ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಂದಿಗೆ ಫೋನ್ ಮೂಲಕ ಸಂಪರ್ಕಿಸಿ, ಕೈಕಂಬದ ರಸ್ತೆಯ ತಡೆಗೋಡೆಯ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಸೂಚನೆ ನೀಡಿದರು. ಶಾಸಕರು ಶಾಶ್ವತವಾಗಿ ನಾಗರಿಕರ ಸಮಸ್ಯೆಗೆ ಸ್ಪಂದಿಸುವಂತೆ ಭರವಸೆ ನೀಡಿದ್ದು, ಈ ಸ್ಪಂದನೆಗೆ ಕೈಕಂಬದ ನಾಗರಿಕರು ಸಂತೃಪ್ತಿಯ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಸುರೇಶ್ ಬೆಲ್ಚಡ, ಕಂದಾವರ ಮಸೀದಿ ಅಧ್ಯಕ್ಷ ರಾದ ಅಬ್ದುಲ್ಲ ವೆಂಝ್, ಉಪಾಧ್ಯಕ್ಷರಾದ ರಹಮಾನ್ ಮೂನ್ಲೈಟ್, ಮಯ್ಯದಿ ಟೆಂಪೋ, ಡಾ. ಯಾಕೂಬ್ ಹಾಗೂ ಹಲವು ಮುಖಂಡರು ಉಪಸ್ಥಿತರಿದ್ದರು.




