
ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ಕೊಳ್ನಾಡು ಗ್ರಾಮದ ಸಾಲೆತ್ತೂರು-ಕಟ್ಟತ್ತಿಲದಲ್ಲಿ ವಾಸಿಸುತ್ತಿರುವ ಅಬ್ದುಲ್ಲ ಕುಂಞಿಯವರ ಮೊಮ್ಮಗ ಎಂಟು ವರ್ಷದ ಮಗು ಅಬ್ದುರ್ರಹೀಂ ತೀರಾ ಅಪರೂಪದ ರೋಗದಿಂದ ಬಳಲುತ್ತಿದ್ದಾನೆ.
ಕೂಲಿಕೆಲಸ ಮಾಡಿ ಜೀವನ ನಡೆಸುವ ಕುಟುಂಬವು ಮಗುವಿನ ಚಿಕಿತ್ಸೆ,ಔಷಧಿಗಾಗಿ ಪ್ರತಿ ತಿಂಗಳು 13,000 ದಷ್ಟು ಖರ್ಚು ಮಾಡುತ್ತಿದ್ದಾರೆ. ಇದರೆಡೆಯಾಗಿ ಸಿಡಿಲು ಬಡಿದು ಮನೆಯು ಸಂಪೂರ್ಣವಾಗಿ ಹಾನಿಗೊಂಡಿದ್ದು ತೀವ್ರ ಸಂಕಷ್ಟದಿಂದ ಕುಟುಂಬವು ದಿನದೂಡುತ್ತಿದೆ.
ದಾನಿಗಳ ಮನದಾಳದ ಸಹಕಾರವಲ್ಲದೆ ಬೇರೆ ಯಾವುದೇ ಮಾರ್ಗಗಳಿಲ್ಲ. ಆ ಹಿನ್ನೆಲೆಯಲ್ಲಿ ಮಗುವಿನ ಚಿಕಿತ್ಸೆಗೆ ನೆರವು ನೀಡಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ನೆರವು ನೀಡಲು ಈ ಚಿತ್ರದಲ್ಲಿರುವ ಕ್ಯೂ ಆರ್ ಕೋಡ್ಗೆ ಕಳುಹಿಸಿರಿ.



