
ಮಂಗಳೂರು: ಸ್ತ್ರೀ ಜಾಗೃತಿ ಸಮಿತಿ ಹಾಗು ಗೃಹ ಕಾರ್ಮಿಕರ ಹಕ್ಕುಗಳ ಒಕ್ಕೂಟ ಮಂಗಳೂರು ಇದರ ವತಿಯಿಂದ ದೀಪಾವಳಿಗೆ ಬಕ್ಷೀಸ್ ಬೇಡ ಬೋನಸ್ ನೀಡಬೇಕೆಂದು ದೀಪಾವಳಿ ಪ್ರಚಾರ ಕಾರ್ಯಕ್ರಮವನ್ನು ಕಾವೂರಿನ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಗೃಹ ಕಾರ್ಮಿಕರ ಮಾಲಿಕರು ಈ ಬಾರಿ ಬಕ್ಷೀಸ್ ಕೊಡದೆ ಬೋನಸ್ ನೀಡಬೇಕು ಎಂದು ಸಮಿತಿಯ ಸಂಚಾಲಕಿ ಡಾ ಸಂಸದ್ ಮಾತನಾಡಿದರು. ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ನ ವಿದ್ಯಾರ್ಥಿಗಳು ಜಾಯ್ಸ್ಟನ್ ,ನಿಕಿತ ,ಗ್ಲಾಡ್ ಸನ್ ,ಧೀರಜ್ ಹಾಗು ಗೃಹ ಕಾರ್ಮಿಕರ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಸೀತಮ್ಮ,
ಕಾರ್ಯದರ್ಶಿ ಶ್ರೀಮತಿ ಕವಿತಾ ಶ್ರೀರಾಮ್ ಹಾಗು ಗೃಹ ಕಾರ್ಮಿಕರು ಉಪಸ್ಥಿತಿಯಿದ್ದರು.


