
ಕೊಣಾಜೆ (ಸೆ.20):
ಪಿ.ಎ ಇನ್ಸ್ಟಿಟ್ಯೂಟ್ ಆಫ್ ಫಿಸಿಯೊಥೆರಪಿ, ಪಿ.ಎ ಇಬ್ರಾಹಿಂ ಹಾಜಿ ಮೆಮೊರಿಯಲ್ ಫಿಸಿಯೊಥೆರಪಿ ಸೆಂಟರ್ ಮತ್ತು ಗ್ರಾಮೀಣ ಆರೋಗ್ಯ ರಕ್ಷಣಾ ಮತ್ತು ಅಭಿವೃದ್ದಿ ಕೇಂದ್ರ (ಯೆನೆಪೋಯ ಆಸ್ಪತ್ರೆ, ಮಂಗಳೂರು) ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ವನ್ನು ಪಾಡಿ ಅಂಗನವಾಡಿ ಕೇಂದ್ರದಲ್ಲಿ ಭವ್ಯವಾಗಿ ಉದ್ಘಾಟಿಸಲಾಯಿತು.

ಈ ಕಾರ್ಯಕ್ರಮವನ್ನು ಶ್ರೀಮತಿ ಭಾರತಿ ಎಸ್., ಅಧ್ಯಕ್ಷೆ, ವರ್ಕಡಿ ಗ್ರಾಮ ಪಂಚಾಯತ್ ಅವರು ಉದ್ಘಾಟಿಸಿದರು.
ಡಾ. ಅಫಿಫಾ ಸಲೀಂ, ಪ್ರಾಂಶುಪಾಲರು, ಪಿ.ಎ. ಇನ್ಸ್ಟಿಟ್ಯೂಟ್ ಆಫ್ ಫಿಸಿಯೊಥೆರಪಿ, ಮಂಗಳೂರು ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಶ್ರೀ ಅಬೂಬಕ್ಕರ್ ಸಿದ್ದಿಕ್ ಪಾಡಿ, ಉಪಾಧ್ಯಕ್ಷರು, ವರ್ಕಡಿ ಗ್ರಾಮ ಪಂಚಾಯತ್ ಹಾಗೂ ಡಾ. ಸಲೀಮುಲ್ಲಾ ಖಾನ್, ಪ್ರಾಂಶುಪಾಲರು, ಪಿ.ಎ ಫಾರ್ಮಸಿ ಕಾಲೇಜು ಭಾಗವಹಿಸಿದ್ದರು.

ಈ ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ಮೂಳೆ ತಪಾಸಣೆ, ಸ್ನಾಯು-ಸಂಧಿ ತಪಾಸಣೆ, ರಕ್ತದೊತ್ತಡ ಪರೀಕ್ಷೆ, ಮಧುಮೇಹ ತಪಾಸಣೆ, ನರ ಮತ್ತು ಹೃದಯ ಸಂಬಂಧಿತ ತಪಾಸಣೆ ಸೇರಿದಂತೆ ವಿವಿಧ ಸೇವೆಗಳು ಸ್ಥಳೀಯ ಜನತೆಗೆ ಉಚಿತವಾಗಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು.
ಶಿಬಿರದಲ್ಲಿ , ಸ್ನಾಯು ನೋವು,ಅಲರ್ಜಿ, ರಕ್ತದೊತ್ತಡ, ಹೃದಯ ಸಮಸ್ಯೆ ಹಾಗೂ ಮಧುಮೇಹ ಮುಂತಾದ ಕಾಯಿಲೆಗಳ ಕುರಿತು ತಪಾಸಣೆ ಮತ್ತು ಮಾರ್ಗದರ್ಶನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವೈದ್ಯಕೀಯ ತಜ್ಞರು ಮತ್ತು ಸಿಬ್ಬಂದಿ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸಿ, ಗ್ರಾಮೀಣ ಪ್ರದೇಶಗಳ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ತಲುಪಿಸುವಲ್ಲಿ ಮಹತ್ತರ ಕೊಡುಗೆ ನೀಡಿದರು.
ಸ್ಥಳೀಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಡಾ.ಶ್ರುತಿ ಸತ್ಯನ್ ಮತ್ತು ಶ್ರೀ ನೌಫಲ್ ಪಾಡಿ ಕಾರ್ಯಕ್ರಮವನ್ನು ಸಂಯೋಜಿಸಿದರು.



