ಸರ್ಕಾರ, ಪೋಲಿಸ್ ಇಲಾಖೆ ಪುತ್ತೂರು ಶಾಸಕರು ಹಾಗೂ ಬಿಜೆಪಿ ಕಾಂಗ್ರೆಸ್ ವಿರುದ್ಧ ವ್ಯಾಪಕ ಆಕ್ರೋಶ
ಮಂಗಳೂರು: ಪುತ್ತೂರು ತಾಲೂಕಿನ ಈಶ್ವರಮಂಗಳದ ಬೆಳ್ಳಿಚ್ಚಡವು ಎಂಬಲ್ಲಿ ಗೋಸಾಗಾಟಗಾರನ ವಿರುದ್ಧ ಶೂಟೌಟ್ ಪ್ರಕರಣವು ನಕಲಿ ಎಂದು ಆರೋಪಿಸಿ ಹಾಗೂ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು #DKPoliceFakeFiring
#WeDemandJudicialEnquiry
ಎಂಬ ಹ್ಯಾಶ್ ಟ್ಯಾಗ್ ಬಳಸಿಕೊಂಡು X ಅಭಿಯಾನ ನಡೆಸಿದ್ದಾರೆ.ಅಭಿಯಾನದುದ್ದಕ್ಕೂ ಪೋಲಿಸ್ ಇಲಾಖೆ, ಪುತ್ತೂರು ಶಾಸಕ ಅಶೋಕ್ ರೈ ,ರೌಡಿಶೀಟರ್ ಅರುಣ್ ಕುಮಾರ್ ಪುತ್ತಿಲನ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.ಒಟ್ಟಾರೆಯಾಗಿ ಈ ಶೂಟೌಟ್ ಪ್ರಕರಣವು ನಕಲಿಯಾಗಿದ್ದು, ವ್ಯಾಪಾರಿಯು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ತೆರಿಗೆ ಪಾವತಿಸಿ ಹಿಂದು ಬಾಂದವರಿಂದ ಜಾನುವಾರು ಖರೀದಿಸಲಾಗಿದೆ,ಹಾಗೂ ಹತ್ತಿರದಿಂದ ಶೂಟೌಟ್ ಮಾಡಲಾಗಿದೆ.ಜನಮನ ಕಾರ್ಯಕ್ರಮದಲ್ಲಿ ಆದ ಅಸ್ತವ್ಯಸ್ತತೆಯ ಮುಜುಗರದಿಂದ ತಪ್ಪಿಸಿಕೊಳ್ಳಲು ವ್ಯವಸ್ಥಿತವಾಗಿ ಷಡ್ಯಂತರ ನಡೆಲಾಗಿದೆ.ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪ ವ್ಯಕ್ತವಾಗಿದೆ.ಮತ್ತೊಬ್ಬ ಬಳಕೆದಾರರುಉತ್ತರ ಪ್ರದೇಶದ ಬಿಜೆಪಿ ಸಂಸದ ಸಂಗೀತ್ ಸೋಮ್ ಸೇರಿದಂತೆ ಇನ್ನಿತರ ಕೆಲವು ಬಿಜೆಪಿ ಶಾಸಕರ ಒಡೆತದ ಕಂಪನಿಯ ಮುಖಾಂತರವೇ ರಫ್ತು ಆಗುತ್ತಿರುವಾಗ ಈಕಡೆ ಯಾಕೆ ಬಿಜೆಪಿ ಹಾಗೂ ಕಾಂಗ್ರೆಸ್ ಜಂಟಿಯಾಗಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ,ಎಂದು ಆರೋಪಿಸಿದ್ದಾರೆ



