ಬೆಂಗಳೂರು: ಉಳ್ಳಾಲ ತಾಲೂಕು ಅಲೇರಿ ಮೂಲ ಕ್ಷೇತ್ರದ ಅಧ್ಯಕ್ಷರಾದ ಶಿವರಾಜ್ ಪಿ.ಬಿ. ನೇತೃತ್ವದಲ್ಲಿ ಪದಾಧಿಕಾರಿಗಳ ತಂಡ ವಿಧಾನ ಸೌಧದಲ್ಲಿ ಸ್ವೀಕರ್ ಕಚೇರಿಗೇ ಭೇಟಿ ನೀಡಿ, ಸ್ಪೀಕರ್ ಖಾದರ್ ಮತ್ತು ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಅಲೇರಿ ಮೂಲ ಕ್ಷೇತ್ರಕ್ಕೆ 10.ಕೋಟಿ ಅನುದಾನ ಬಿಡುಗಡೆ ಮಾಡುವ ಬಗ್ಗೆ ಮನವಿ ಮಾಡಿದರು.

ಮಾನ್ಯ ಸ್ವೀಕರ್ ರವರು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಕ್ಷೇತ್ರದ ಪರವಾಗಿ ಮಾತನಾಡಿ 10.ಕೋಟಿ ಅನುದಾನ ನೀಡುವಂತೆ ಮನವಿ ಮಾಡಿದರು. ಅದಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆ ಅಧ್ಯಕ್ಷರ ನೇತೃತ್ವದ ನಿಯೋಗವು ಸಲ್ಲಿಸಿದರು. ಸಚಿವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಬಜೆಟ್ನಲ್ಲಿ ಸೇರಿಸಲು ಮುಖ್ಯಮಂತ್ರಿ ಗಮನಕ್ಕೆ ತರುವುದಾಗಿ ತಿಳಿಸಿದರು.

ನಿಯೋಗದ ಜೊತೆ ಸೇರಿ ಪರಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ದಿನೇಶ್ ಮುಳೂರು ಈ ಸಂದರ್ಭದಲ್ಲಿ ಅಲೇರಿ ಕ್ಷೇತ್ರದ ಪರವಾಗಿ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರು.


