ಕಿಸಾನ್ ಜಾಗೃತಿ ಗ್ರಾಮ ಮಾವೇಶ ಮತ್ತು ಮಾಹಿತಿ ಕಾರ್ಯಾಗಾರ

Date:

ಮೂಡುಬಿದಿರೆ : ತಾಲೂಕಿನ ತೆಂಕಮಿಜಾರು ಗ್ರಾಮ ಸಮಿತಿಯ ಕಿಸಾನ್ ಜಾಗೃತಿ ಗ್ರಾಮ ಸಮಾವೇಶ ಕಾರ್ಯಕ್ರಮವು ಕಿಸಾನ್ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಭಂಡಾರಿ ಇವರ ಮಾರ್ಗದರ್ಶನದಲ್ಲಿ ಭಾನುವಾರ ಅಶ್ವತ್ಥಪುರದ ಪಂಚಾಯತ್ ವಿವಿಧೋದ್ದೇಶ ಸಭಾಂಗಣ ಸಂತೆಕಟ್ಟೆಯಲ್ಲಿ ನಡೆಯಿತು.ಗ್ರಾಮದ ಹಿರಿಯ ಪ್ರಗತಿಪರ ಕೃಷಿಕ, ರಾಜ್ಯ ಪ್ರಶಸ್ತಿ ವಿಜೇತ ಶಂಕರ್ ರೈ ಮಿಜಾರುಗುತ್ತು ಸಮಾವೇಶವನ್ನು ಉದ್ಘಾಟಿಸಿದರು.

ಹೊನ್ನಪ್ಪ ಗೌಡ ಅವರು ಸಭೆಯ ಅಧ್ಯಕ್ಷತೆಯಲ್ಲಿ ನಡೆದ ಕಾಯ೯ಕ್ರಮದಲ್ಲಿ ರಾಜ್ಯ ಸರ್ಕಾರ ಇತ್ತೀಚೆಗೆ ಕುಮ್ಕಿ ಕಾಯ್ದೆಗೆ ತಂದಿರುವ ತಿದ್ದುಪಡಿ ಕುರಿತು ಮತ್ತು ಅಕ್ರಮ ಸಕ್ರಮೀಕರಣ ಅರ್ಜಿಗಳ ಇತ್ಯರ್ಥದ ಬಗ್ಗೆ ಸರಕಾರ ಹೊರಡಿಸಿರುವ ಹಲವು ಷರತ್ತುಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯ,ಕೃಷಿ ಮಾಡಿದ ಭೂಮಿಗೆ ಹಕ್ಕು ಪತ್ರ ಸಿಗಲೇಬೇಕೆನ್ನುವ ಬಗ್ಗೆ ಹೋರಾಟ ನಡೆಸಬೇಕೆಂದು ತೀರ್ಮಾನ ತೆಗೆದುಕೊಳ್ಳಲಾಯಿತು.

ವಯೋವಂಧನ್ ಆಯುಷ್ಮಾನ್ ಯೋಜನೆಯ ಮಾಹಿತಿಯನ್ನು ಶಾಂತಿಪ್ರಸಾದ್ ಹೆಗ್ಡೆ ಅವರು ನೀಡಿದರು.

ಎಪ್ಪತ್ತು ವರ್ಷಕ್ಕೆ ಮೇಲ್ಪಟ್ಟ 12 ಜನರ ಹೆಸರನ್ನು ನೋಂದಾಯಿಸುವ ಪ್ರಕ್ರಿಯೆಗೆ ಚಾಲನೆಯನ್ನು ನೀಡಲಾಯಿತು.

ನಂತರ ನಡೆದ ಕಾಯ೯ಕ್ರಮಗಳಲ್ಲಿ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಬಗ್ಗೆ ಸೆಲ್ಕೋ ಸೋಲಾರ್ ಕಂಪೆನಿಯ ಹಿರಿಯ ಪ್ರಬಂಧಕ ರವೀನಾ ಬಂಗೇರ ಮಾಹಿತಿ ನೀಡಿದರು.

ಗೌರವ : ಗ್ರಾಮದ ಹಿರಿಯ ಹಾಗೂ ಪ್ರಗತಿಪರ ರಾಜ್ಯ ಪ್ರಶಸ್ತಿ ವಿಜೇತ ಶಂಕರ್ ಶೆಟ್ಟಿ ಮಿಜಾರ್ ಗುತ್ತು, ಸದಾಶಿವ ಶೆಟ್ಟಿ ಉತ್ತಲಾಡಿ, ತರಕಾರಿ
ಬೆಳೆಯಲ್ಲಿ ಹೆಸರು ಮಾಡಿರುವ ಮಾಧವ ಗೌಡರನ್ನು ಫಲ ಪುಷ್ಪ ನೀಡಿ ಗೌರವಿಸಲಾಯಿತು.

ತೆಂಕಮಿಜಾರು ಗ್ರಾ.ಪಂಚಾಯತ್ ಅಧ್ಯಕ್ಷೆ ಶಾಲಿನಿ ಸಾಲ್ಯಾನ್, ವಿಘ್ನೇಶ್ ಭಟ್ ಮತ್ತು ಕಿಸಾನ್ ಕರೆ ಸಮಿತಿಯ ಪ್ರಮುಖರು ಹಾಗೂ ಹಿರಿಯ ಕೃಷಿಕರಾದ ಜಯರಾಮ್ ಭಟ್, ಇರುವೈಲು ಕಿಸಾನ್ ಗ್ರಾಮ ಸಮಿತಿಯ ಅಧ್ಯಕ್ಷ ರಾಜೇಶ್ ಕಾಳೂರು,ವಸಂತ್ ಭಟ್,


ಕಲ್ಲಮುಂಡ್ಕೂರು ಗ್ರಾಮದ ಕಿಸಾನ್ ಗೌರವಾಧ್ಯಕ್ಷ ಜಾನ್ ರೆಬೆಲ್ಲೋ,‌ ಹೈ ಟೆನ್ಶನ್ ವಿದ್ಯುತ್ ಟವರ್ ವಿರೋಧಿ ಹೋರಾಟ ಸಮಿತಿಯ ಪ್ರಮುಖರಾದ ಎಡಪದವು ಕೆ .ಬಿ .ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸೂರ್ಯ ಘರ್ ಯೋಜನೆಗೆ ಗ್ರಾಮದ 30 ಕ್ಕೂ ಹೆಚ್ಚು ರೈತರು ತಮ್ಮ ಹೆಸರನ್ನು ನೋಂದಾಯಿಸಲಾಯಿತು.
ಯುಕೆಟಿಸಿಎಲ್ ವಿದ್ಯುತ್ ಕಂಪನಿಯು ಗ್ರಾಮದ ಭಾಸ್ಕರ್ ಶೆಟ್ಟಿ ಮತ್ತು ಬಡಗನಿಜಾರು ಗ್ರಾಮದ ಸಂಜೀವ ಗೌಡರ ಅಡಿಕೆ ತೋಟವನ್ನು ನಾಶಪಡಿಸಿರುವುದನ್ನ ಸಭೆಯಲ್ಲಿ ಸರ್ವಾನು ಮತದಿಂದ ಖಂಡಿಸಲಾಯಿತು. ಈ ಬಗ್ಗೆ ಗ್ರಾಮದ ರೈತರು ಜೊತೆಗೂಡಿ, ಕಂಪನಿ ನಾಶ ಮಾಡಿರುವ ಕೃಷಿಗೆ ಮೌಲ್ಯ ಆಧರಿತ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ನೀಡಬೇಕು ಮತ್ತು ಅಷ್ಟೇ ಪ್ರಮಾಣದ ಭೂಮಿಯನ್ನ ಸರಕಾರ ಮಂಜೂರು ಗೊಳಿಸಬೇಕೆಂದು ಒತ್ತಾಯಿಸಿ ಹೋರಾಟವನ್ನು ನಡೆಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

‘ನಮ್ಮ ನಡಿಗೆ ಮುಡಿಪು ಪುಣ್ಯ ಕ್ಷೇತ್ರದ ಕಡೆಗೆ’ ಆದ್ಯಾತ್ಮಿಕ ಜಾಥಾ

ಉಳ್ಳಾಲ‌: ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ ವತಿಯಿಂದ ಭಾನುವಾರ ನಡೆದ 'ನಮ್ಮ...

ಮಸ್ಜಿದ್ ಬಿಲಾಲ್ ಸಜಿಪನಡು ಇದರ ನೂತನ ಅಧ್ಯಕ್ಷರಾಗಿ ಜಾಬಿರ್ ಮತ್ತು ಕಾರ್ಯದರ್ಶಿಯಾಗಿ ಇರ್ಶಾದ್

ಉಳ್ಳಾಲ: ಮಸ್ಜಿದ್ ಬಿಲಾಲ್ ಸಲಫಿ ಜುಮಾ ಮಸೀದಿ ಸಜಿಪನಡು ಇದರ ವಾರ್ಷಿಕ...

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...