ಮಂಗಳೂರು, ಮಾ12: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್ಡಿಟಿಯು) ಮಂಗಳೂರು ನಗರ ಜಿಲ್ಲೆ ಹಾಗೂ ಪಾಯೋನೀರ್ ಕಾಂಪ್ಲೆಕ್ಸ್ ವರ್ತಕರ ಸಂಘ ಇದರ ಜಂಟಿ ಆಶ್ರಯದಲ್ಲಿ ಬೃಹತ್ ಇಫ್ತಾರ್ ಕೂಟ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜಿಲ್ಲಾಧ್ಯಕ್ಷರಾದ ರಹಿಮಾನ್ ಬೋಳಿಯಾರ್ ರವರ ಅಧ್ಯಕ್ಷತೆಯಲ್ಲಿ ಪಾಯೋನೀರ್ ಕಾಂಪ್ಲೆಕ್ಸ್ ನೆಲಮಹಡಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ಡಿಟಿಯು ರಾಜ್ಯ ಸಂಚಾಲಕರಾದ ಅತಾವುಲ್ಲಾ ಜೋಕಟ್ಟೆ ಮಾತನಾಡಿ ಇದು ಕೇವಲ ಒಂದು ಇಫ್ತಾರ್ ಕೂಟ ಮಾತ್ರವಲ್ಲ ಬದಲಾಗಿ ಮಾನವ ಸಂಬಂಧಗಳನ್ನು ಒಟ್ಟುಗೂಡಿಸುವ ಒಂದು ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಾಗೂ ಇಂತಹ ಸೌಹಾರ್ದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಉಪವಾಸ ಮತ್ತು ಕಾರ್ಮಿಕರ ಬದುಕಿಗೆ ಅವಿನಾಭಾವ ಸಂಬಂಧವಿದೆ. ಕಾರ್ಮಿಕರ ಪರಿಶ್ರಮ ದೇಶದ ಪ್ರಗತಿಗೆ ಬಹುಮುಖ್ಯವಾಗಿದ್ದು ಹೇಳುತ್ತ ಕಾರ್ಮಿಕರನ್ನು ಪ್ರಶಂಸಿದರು.

ನ್ಯಾಷನಲ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಖಾಲಿದ್ ಸರ್ ರವರು ಮತನಾಡಿ ನಾವೆಲ್ಲರೂ ಭಾರತೀಯರು ನಮ್ಮಲ್ಲಿ ಜಾತಿ ಧರ್ಮದ ಯಾವುದೇ ಭೇದಭಾವ ಇರಬಾರದು ಸೌಹಾರ್ದತೆ ಸಹೋದರತೆಯಿಂದ ಕೂಡಿ ಬದುಕಬೇಕು ಹೀಗೆ ಬದುಕಿದರೆ ಸುಂದರ ಭಾರತವನ್ನು ಕಟ್ಟಲು ಸಾಧ್ಯ ಅದಕ್ಕೊಂದು ಸ್ಪಷ್ಟ ಉದಾಹರಣೆಯಾಗಿದೆ ಇವತ್ತಿನ ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮದವರು ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದು ಎಂದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ವಿಶುಕುಮಾರ್ ಎಸ್.ಡಿ.ಪಿ.ಐ ಮಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಮಾಡೆಲ್ಸ್ ಇನ್ ಮೈಂಡ್ ಮಂಗಳೂರು ಇದರ ಮಾಲಕರಾದ ಹಮೀದ್ ಶಾ, ಭುವಿ ಎಂಟರ್ಪ್ರೈಸ್ ಮಾಲಕರಾದ ರಾಜ, ಸುಪರ್ ಸಲೂನ್ ಮಾಲಕರಾದ ಶ್ರೀನಿವಾಸ್, ಎಸ್.ಡಿ.ಟಿ.ಯು ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಸಲೀಂ ಜಿ.ಕೆ, ಎಸ್.ಡಿ.ಟಿ.ಯು ಮಂಗಳೂರು ನಗರ ತಾಲೂಕು ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಬಿಪಿ ಹಾಗೂ ಮುಂತಾದ ಸ್ಥಳೀಯ ಪಾಯೋನೀರ್ ಕಾಂಪ್ಲೆಕ್ಸ್ ವ್ಯಾಪಾರಸ್ಥರು ಉಪಸ್ಥಿತರಿದ್ದರು.
ಎಸ್ಡಿಟಿಯು ಮಂಗಳೂರು ನಗರ ತಾಲೂಕು ಸಮಿತಿ ಉಪಾಧ್ಯಕ್ಷರಾದ ಮುಸ್ತಫಾ ಪರ್ಲಿಯಾ ಸ್ವಾಗತಿಸಿದರು, ಕಾರ್ಯದರ್ಶಿ ಅನ್ಸಾರ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿದರು.


