ಉಳ್ಳಾಲ; ಮಾ 12: 2026ನೇ ಸಾಲಿನ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಉಳ್ಳಾಲ ತಾಲೂಕಿನ ಹಜ್ ಯಾತ್ರಿಕರ ವೈದ್ಯಕೀಯ ತಪಾಸಣಾ ಶಿಬಿರವು ಉಳ್ಳಾಲ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಗುರುವಾರ ನಡೆಯಿತು.

ಈ ಶಿಬಿರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಹಜ್ ನಿರ್ವಹಣಾ ಸಮಿತಿ ಸದಸ್ಯರುಗಳಾದ ಇಬ್ರಾಹಿಮ್ ಕೊಣಾಜೆ ಮತ್ತು ಫಾರೂಕ್ ಕಿನ್ಯ, ಉಪಸ್ಥಿತರಿದ್ದು ಹಜ್ ಯಾತ್ರಿಕರಿಗೆ ಸಹಕರಿಸಿದರು. ಗುರುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 3:30ರ ತನಕ ಒಟ್ಟು 111ಹಜ್ ಯಾತ್ರಿಕರು ಆಗಮಿಸಿ ಸದುಪಯೋಗವನ್ನು ಪಡೆದುಕೊಂಡರು.



