ಬಜ್ಪೆ ಮಾರುಕಟ್ಟೆ ಟೆಂಡರ್ ಪಡೆದ ಗುತ್ತಿಗೆದಾರನ ಮೇಲೆ ಕಾಂಗ್ರೆಸ್ ಮುಖಂಡ-ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷನಿಂದ ದೌರ್ಜನ್ಯ

Date:

” ದಿನವಹಿ ಮಾರುಕಟ್ಟೆ ಮತ್ತು ವಾರದ ಸಂತೆಸುಂಕ ವಸೂಲಿ” ಗೆ ಇತ್ತೀಚೆಗೆ ಬಜಪೆ ಪಟ್ಟಣ ಪಂಚಾಯತ್ ಮೇಲಾಧಿಕಾರಿ ಟೆಂಡರ್ ಆಹ್ವಾನಿಸಿದ್ದು,ಟೆಂಡರ್ ಪಡೆದಿರುವ ಜರಿನಗರದ ಮೊಹಮ್ಮದ್ ಇರ್ಷಾದ್ ರವರು ಬಜಪೆ ಪಂಚಾಯತ್ ಮಾಜಿ ಅಧ್ಯಕ್ಷ-ಕಾಂಗ್ರೆಸ್ ಮುಖಂಡ ಶಾಹುಲ್ ಹಮೀದ್ ಮೇಲೆ ದೌರ್ಜನ್ಯ-ಕಿರುಕುಳದ ಕೇಸು ನೀಡಲಾಗಿದೆ.

ಬಜಪೆ ಪಟ್ಟಣಪಂಚಾಯತ್ ಆಡಳಿತವು ಕಳೆದ ತಿಂಗಳು ” ದಿನವಹಿ ಮಾರುಕಟ್ಟೆ ಮತ್ತು ವಾರದ ಸಂತೆ ಸುಂಕ”ಬಗ್ಗೆ ಟೆಂಡರ್ ಆಹ್ವಾನಿಸಿದ್ದು ಬಜಪೆ ಪಟ್ಟಣಪಂಚಾಯತ್/ಸಿಆರ್/ಕಂ.ನಿ/16/2025-26 ರ ತಾರೀಕು12/8/2025 ಆದೇಶ ಪ್ರಕಾರ 19,94,318 ರೂಪಾಯಿ ಪಾವತಿಯಲ್ಲಿ ಅರ್ಧ ಅಂದರೆ ರೂಪಾಯಿ 9,97,159 ಪಾವತಿಸಬೇಕಾಗಿತ್ತು,ಕರಾರು ಪತ್ರದ ಷರತ್ತಿನಂತೆ ತಾರೀಕು 13/8/2025 ರಿಂದ 31/1/2026 ತನಕ ಟೆಂಡರ್ ನ ರೂಪಾಯಿ 9,97,159 ಪಾವತಿಸಲಾಗಿದೆ.ಈ ನೆಲೆಯಲ್ಲಿ 13/8/25 ರಿಂದ ಬಜಪೆ ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ದಿನವಹಿ ಮಾರುಕಟ್ಟೆ ಮತ್ತು ವಾರದ ಸಂತೆ ಸುಂಕ ವಸೂಲಿ ನಡೆಸಲು ಕಾರ್ಯಾದೇಶ ನೀಡಲಾಗಿದೆ.

ಈ ನೆಲೆಯಲ್ಲಿ ಗುತ್ತಿಗೆದಾರ ಮೊಹಮ್ಮದ್ ಇರ್ಷಾದ್ ಬಜಪೆ ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ದಿನವಹಿ ಮಾರುಕಟ್ಟೆ ಮತ್ತು ವಾರದ ಸಂತೆ ಸುಂಕ ವಸೂಲಿ ಮಾಡಲು ಪ್ರಾರಂಬಿಸಲಾಗಿದ್ದು ವಸೂಲಿ ಗೆ ಹೋದ ಸಂದರ್ಭದಲ್ಲಿ ಈ ಹಿಂದೆ ಟೆಂಡರ್ ಪಡೆದಿದ್ದವನ ಅಣ್ಣ ಶಾಹುಲ್ ಹಮೀದ್ ಎಂಬವನು ಮಾನಸಿಕ -ದೈಹಿಕ ಕಿರುಕುಳ ನೀಡುತಿದ್ದಾನೆಂದು ದೂರು ನೀಡಲಾಗಿದೆ. ವಾರದ ಸಂತೆಗೆ ಬಂದಿರುವ ಮಾರಾಟಗಾರರಲ್ಲಿ ನನಗೆ ಸಂತೆ ಸುಂಕ ಸರಿಯಾಗಿ ಕೊಡದಂತೆ ಆದೇಶಿಸುವುದು,ನನ್ನ ಎದುರು ಬದುರು ಬಂದು ತೊಂದರೆ ನೀಡುತಿದ್ದಾನೆ,ಇದರಿಂದ ಸರಕಾರಿ ಇಲಾಖೆಯಿಂದ ಟೆಂಡರ್ ಮೂಲಕ ಪಡೆದ ಈ ಕಾರ್ಯಕ್ಕೆ ತೊಂದರೆ ನೀಡುತಿರುವ ಶಾಹುಲ್ ಹಮೀದ್ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಜಪೆ ಪೋಲೀಸ್ ಠಾಣೆ ಮತ್ತು ಪೋಲೀಸ್ ಕಮಿಷನರ್ ಗೆ ನೀಡಿರುವ ದೂರಿನಲ್ಲಿ ಆಪಾದಿಸಲಾಗಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜುಲೈ 20: ಕಲ್ಲಡ್ಕ ಮಸೀದಿಯ ನೂತನ ಖಾಝಿಯಾಗಿ ಜಿಫ್ರಿ ಮುತ್ತುಕೋಯಾ ತಂಙಳ್ ಅಧಿಕಾರ ಸ್ವೀಕಾರ

ಬಂಟ್ವಾಳ: ಇತ್ತೀಚೆಗೆ ನಿಧನರಾದ ಶೈಖುನಾ ತ್ವಾಖಾ ಉಸ್ತಾದ್ ಅವರ ಉತ್ತರಾಧಿಕಾರಿಯಾಗಿ ಕಲ್ಲಡ್ಕ...

ಉಚ್ಚಿಲ: ಸೋಮೇಶ್ವರ ಪೆಟ್ರೋಲ್ ಪಂಪ್‌ನಲ್ಲಿ ಸ್ಪೀಡ್-೧೦೦ ಮಾರುಕಟ್ಟೆಗೆ ಬಿಡುಗಡೆ

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಪರಿಚಯಿಸಿರುವ ಅತಿ ಉನ್ನತ ಮಟ್ಟದ...

ಟಿಪ್ಪುನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ವಿದ್ಯಾಸಂಸ್ಥೆಯ 16ನೇ ವಾರ್ಷಿಕೋತ್ಸವದ ಸ್ವಾಗತ ಸಮಿತಿ ರಚನೆ

ವಿಟ್ಲ: ವಿಟ್ಲದ ಟಿಪ್ಪು ನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ವಿದ್ಯಾಸಂಸ್ಥೆಯ 16ನೇ...