ಬಜ್ಪೆ ಮಾರುಕಟ್ಟೆ ಟೆಂಡರ್ ಪಡೆದ ಗುತ್ತಿಗೆದಾರನ ಮೇಲೆ ಕಾಂಗ್ರೆಸ್ ಮುಖಂಡ-ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷನಿಂದ ದೌರ್ಜನ್ಯ

Date:

” ದಿನವಹಿ ಮಾರುಕಟ್ಟೆ ಮತ್ತು ವಾರದ ಸಂತೆಸುಂಕ ವಸೂಲಿ” ಗೆ ಇತ್ತೀಚೆಗೆ ಬಜಪೆ ಪಟ್ಟಣ ಪಂಚಾಯತ್ ಮೇಲಾಧಿಕಾರಿ ಟೆಂಡರ್ ಆಹ್ವಾನಿಸಿದ್ದು,ಟೆಂಡರ್ ಪಡೆದಿರುವ ಜರಿನಗರದ ಮೊಹಮ್ಮದ್ ಇರ್ಷಾದ್ ರವರು ಬಜಪೆ ಪಂಚಾಯತ್ ಮಾಜಿ ಅಧ್ಯಕ್ಷ-ಕಾಂಗ್ರೆಸ್ ಮುಖಂಡ ಶಾಹುಲ್ ಹಮೀದ್ ಮೇಲೆ ದೌರ್ಜನ್ಯ-ಕಿರುಕುಳದ ಕೇಸು ನೀಡಲಾಗಿದೆ.

ಬಜಪೆ ಪಟ್ಟಣಪಂಚಾಯತ್ ಆಡಳಿತವು ಕಳೆದ ತಿಂಗಳು ” ದಿನವಹಿ ಮಾರುಕಟ್ಟೆ ಮತ್ತು ವಾರದ ಸಂತೆ ಸುಂಕ”ಬಗ್ಗೆ ಟೆಂಡರ್ ಆಹ್ವಾನಿಸಿದ್ದು ಬಜಪೆ ಪಟ್ಟಣಪಂಚಾಯತ್/ಸಿಆರ್/ಕಂ.ನಿ/16/2025-26 ರ ತಾರೀಕು12/8/2025 ಆದೇಶ ಪ್ರಕಾರ 19,94,318 ರೂಪಾಯಿ ಪಾವತಿಯಲ್ಲಿ ಅರ್ಧ ಅಂದರೆ ರೂಪಾಯಿ 9,97,159 ಪಾವತಿಸಬೇಕಾಗಿತ್ತು,ಕರಾರು ಪತ್ರದ ಷರತ್ತಿನಂತೆ ತಾರೀಕು 13/8/2025 ರಿಂದ 31/1/2026 ತನಕ ಟೆಂಡರ್ ನ ರೂಪಾಯಿ 9,97,159 ಪಾವತಿಸಲಾಗಿದೆ.ಈ ನೆಲೆಯಲ್ಲಿ 13/8/25 ರಿಂದ ಬಜಪೆ ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ದಿನವಹಿ ಮಾರುಕಟ್ಟೆ ಮತ್ತು ವಾರದ ಸಂತೆ ಸುಂಕ ವಸೂಲಿ ನಡೆಸಲು ಕಾರ್ಯಾದೇಶ ನೀಡಲಾಗಿದೆ.

ಈ ನೆಲೆಯಲ್ಲಿ ಗುತ್ತಿಗೆದಾರ ಮೊಹಮ್ಮದ್ ಇರ್ಷಾದ್ ಬಜಪೆ ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ದಿನವಹಿ ಮಾರುಕಟ್ಟೆ ಮತ್ತು ವಾರದ ಸಂತೆ ಸುಂಕ ವಸೂಲಿ ಮಾಡಲು ಪ್ರಾರಂಬಿಸಲಾಗಿದ್ದು ವಸೂಲಿ ಗೆ ಹೋದ ಸಂದರ್ಭದಲ್ಲಿ ಈ ಹಿಂದೆ ಟೆಂಡರ್ ಪಡೆದಿದ್ದವನ ಅಣ್ಣ ಶಾಹುಲ್ ಹಮೀದ್ ಎಂಬವನು ಮಾನಸಿಕ -ದೈಹಿಕ ಕಿರುಕುಳ ನೀಡುತಿದ್ದಾನೆಂದು ದೂರು ನೀಡಲಾಗಿದೆ. ವಾರದ ಸಂತೆಗೆ ಬಂದಿರುವ ಮಾರಾಟಗಾರರಲ್ಲಿ ನನಗೆ ಸಂತೆ ಸುಂಕ ಸರಿಯಾಗಿ ಕೊಡದಂತೆ ಆದೇಶಿಸುವುದು,ನನ್ನ ಎದುರು ಬದುರು ಬಂದು ತೊಂದರೆ ನೀಡುತಿದ್ದಾನೆ,ಇದರಿಂದ ಸರಕಾರಿ ಇಲಾಖೆಯಿಂದ ಟೆಂಡರ್ ಮೂಲಕ ಪಡೆದ ಈ ಕಾರ್ಯಕ್ಕೆ ತೊಂದರೆ ನೀಡುತಿರುವ ಶಾಹುಲ್ ಹಮೀದ್ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಜಪೆ ಪೋಲೀಸ್ ಠಾಣೆ ಮತ್ತು ಪೋಲೀಸ್ ಕಮಿಷನರ್ ಗೆ ನೀಡಿರುವ ದೂರಿನಲ್ಲಿ ಆಪಾದಿಸಲಾಗಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೂರು ವರ್ಷಗಳ ಬಳಿಕ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್

ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮೂರು ವರ್ಷಗಳ ಬಳಿಕ ಕೆಪಿಸಿಸಿ...

ಕನಿಷ್ಠ ಎರಡು ಪರಿಷತ್ ಸ್ಥಾನ, ಒಂದು ರಾಜ್ಯಸಭಾ ಸ್ಥಾನ ಮುಸ್ಲಿಮರಿಗೆ ಕೊಡಿ: ಕಾಂಗ್ರೆಸ್‌ಗೆ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 42 ರೂ. ಏರಿಕೆ

ಹೊಸದಿಲ್ಲಿ: 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಂದಿನಿಂದಲೇ ಜಾರಿಗೆ...