ಬಜ್ಪೆ ಮಾರುಕಟ್ಟೆ ಟೆಂಡರ್ ಪಡೆದ ಗುತ್ತಿಗೆದಾರನ ಮೇಲೆ ಕಾಂಗ್ರೆಸ್ ಮುಖಂಡ-ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷನಿಂದ ದೌರ್ಜನ್ಯ

Date:

” ದಿನವಹಿ ಮಾರುಕಟ್ಟೆ ಮತ್ತು ವಾರದ ಸಂತೆಸುಂಕ ವಸೂಲಿ” ಗೆ ಇತ್ತೀಚೆಗೆ ಬಜಪೆ ಪಟ್ಟಣ ಪಂಚಾಯತ್ ಮೇಲಾಧಿಕಾರಿ ಟೆಂಡರ್ ಆಹ್ವಾನಿಸಿದ್ದು,ಟೆಂಡರ್ ಪಡೆದಿರುವ ಜರಿನಗರದ ಮೊಹಮ್ಮದ್ ಇರ್ಷಾದ್ ರವರು ಬಜಪೆ ಪಂಚಾಯತ್ ಮಾಜಿ ಅಧ್ಯಕ್ಷ-ಕಾಂಗ್ರೆಸ್ ಮುಖಂಡ ಶಾಹುಲ್ ಹಮೀದ್ ಮೇಲೆ ದೌರ್ಜನ್ಯ-ಕಿರುಕುಳದ ಕೇಸು ನೀಡಲಾಗಿದೆ.

ಬಜಪೆ ಪಟ್ಟಣಪಂಚಾಯತ್ ಆಡಳಿತವು ಕಳೆದ ತಿಂಗಳು ” ದಿನವಹಿ ಮಾರುಕಟ್ಟೆ ಮತ್ತು ವಾರದ ಸಂತೆ ಸುಂಕ”ಬಗ್ಗೆ ಟೆಂಡರ್ ಆಹ್ವಾನಿಸಿದ್ದು ಬಜಪೆ ಪಟ್ಟಣಪಂಚಾಯತ್/ಸಿಆರ್/ಕಂ.ನಿ/16/2025-26 ರ ತಾರೀಕು12/8/2025 ಆದೇಶ ಪ್ರಕಾರ 19,94,318 ರೂಪಾಯಿ ಪಾವತಿಯಲ್ಲಿ ಅರ್ಧ ಅಂದರೆ ರೂಪಾಯಿ 9,97,159 ಪಾವತಿಸಬೇಕಾಗಿತ್ತು,ಕರಾರು ಪತ್ರದ ಷರತ್ತಿನಂತೆ ತಾರೀಕು 13/8/2025 ರಿಂದ 31/1/2026 ತನಕ ಟೆಂಡರ್ ನ ರೂಪಾಯಿ 9,97,159 ಪಾವತಿಸಲಾಗಿದೆ.ಈ ನೆಲೆಯಲ್ಲಿ 13/8/25 ರಿಂದ ಬಜಪೆ ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ದಿನವಹಿ ಮಾರುಕಟ್ಟೆ ಮತ್ತು ವಾರದ ಸಂತೆ ಸುಂಕ ವಸೂಲಿ ನಡೆಸಲು ಕಾರ್ಯಾದೇಶ ನೀಡಲಾಗಿದೆ.

ಈ ನೆಲೆಯಲ್ಲಿ ಗುತ್ತಿಗೆದಾರ ಮೊಹಮ್ಮದ್ ಇರ್ಷಾದ್ ಬಜಪೆ ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ದಿನವಹಿ ಮಾರುಕಟ್ಟೆ ಮತ್ತು ವಾರದ ಸಂತೆ ಸುಂಕ ವಸೂಲಿ ಮಾಡಲು ಪ್ರಾರಂಬಿಸಲಾಗಿದ್ದು ವಸೂಲಿ ಗೆ ಹೋದ ಸಂದರ್ಭದಲ್ಲಿ ಈ ಹಿಂದೆ ಟೆಂಡರ್ ಪಡೆದಿದ್ದವನ ಅಣ್ಣ ಶಾಹುಲ್ ಹಮೀದ್ ಎಂಬವನು ಮಾನಸಿಕ -ದೈಹಿಕ ಕಿರುಕುಳ ನೀಡುತಿದ್ದಾನೆಂದು ದೂರು ನೀಡಲಾಗಿದೆ. ವಾರದ ಸಂತೆಗೆ ಬಂದಿರುವ ಮಾರಾಟಗಾರರಲ್ಲಿ ನನಗೆ ಸಂತೆ ಸುಂಕ ಸರಿಯಾಗಿ ಕೊಡದಂತೆ ಆದೇಶಿಸುವುದು,ನನ್ನ ಎದುರು ಬದುರು ಬಂದು ತೊಂದರೆ ನೀಡುತಿದ್ದಾನೆ,ಇದರಿಂದ ಸರಕಾರಿ ಇಲಾಖೆಯಿಂದ ಟೆಂಡರ್ ಮೂಲಕ ಪಡೆದ ಈ ಕಾರ್ಯಕ್ಕೆ ತೊಂದರೆ ನೀಡುತಿರುವ ಶಾಹುಲ್ ಹಮೀದ್ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಜಪೆ ಪೋಲೀಸ್ ಠಾಣೆ ಮತ್ತು ಪೋಲೀಸ್ ಕಮಿಷನರ್ ಗೆ ನೀಡಿರುವ ದೂರಿನಲ್ಲಿ ಆಪಾದಿಸಲಾಗಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪಿ.ಎ.ಇಂಜಿನಿಯರಿಂಗ್ ಕಾಲೇಜು: ಬಿ.ಇ.(ಹಾನರ್ಸ್) ಪದವೀಧರರಿಗೆ ಅಭಿನಂದನಾ ಸಮಾರಂಭ

ಕೊಣಾಜೆ: ಪದವಿ, ಶಿಕ್ಷಣದೊಂದಿಗೆ ನಾವು ಪಡೆದುಕೊಳ್ಳುವ ಕೌಶಲಗಳು ನಮ್ಮ ಬದುಕಿಗೆ ಸ್ಪೂರ್ತಿಯಾಗುತ್ತವೆ....

ಮಂಗಳೂರು ವಿವಿ 46 ನೇ ಸಂಸ್ಥಾಪನಾ ದಿನಾಚರಣೆ

ಕೋಣಾಜೆ: ಪ್ರಸ್ತುತ ಕಾಲಘಟ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಸ್ವಲ್ಪ ಆತಂಕದ ಸ್ಥಿತಿಯನ್ನು ಎದುರಿಸಿದರೂ...

ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿ ವತಿಯಿಂದ ಆರೋಗ್ಯ ಸುರಕ್ಷಾಧಿಕಾರಿ ಹರಿಣಾಕ್ಷಿ ಅವರಿಗೆ ಬಿಳ್ಕೊಡುಗೆ

ಬಂಟ್ವಾಳ: ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿ ವತಿಯಿಂದ ಆರೋಗ್ಯ ಸುರಕ್ಷಾಧಿಕಾರಿ ಹರಿಣಾಕ್ಷಿ...

ಸೆ. 14 ರಂದು ಸುರಿಬೈಲ್ ಮದರಸ ವಿದ್ಯಾರ್ಥಿಗಳ ಮೀಲಾದ್ ಫೆಸ್ಟ್

ಕಲ್ಲಡ್ಕ: ಬದ್ರಿಯಾ ಜುಮ್ಮಾ ಮಸೀದಿ ಸುರಿಬೈಲ್ ಇದರ ಅಧೀನದಲ್ಲಿರುವ ನುಸ್ರತುಲ್ ಉಲೂಂ...