ಮಂಗಳೂರು: ಮಾ5: ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧ ನಡೆಯುತ್ತಿದ್ದು ಇದರಿಂದ ತೈಲ ಸರಬರಾಜು ಕೊರತೆ ಎದುರಾಗಿದೆ. ಈ ರೀತಿಯ ಕಾರಣಗಳನ್ನು ಹೇಳಿ ಗ್ರಾಹಕರಿಂದ ಹಣ ಲೂಟಿ ಮಾಡುತ್ತಿರುವುದು ಜಿಲ್ಲೆಯ ಕೆಲವು ಗ್ಯಾಸ್ ಪಂಪುಗಳಲ್ಲಿ ಪ್ರಕರಣಗಳು ಬೆಳಕಿಗೆ ಬಂದಿದ್ದು ಈಗಾಗಲೇ ಕೆಲವು ಚಾಲಕರು ಗ್ಯಾಸ್ ಪಂಪ್ ವಿತರಕರಲ್ಲಿ ದರ ಹೆಚ್ಚಿಸಿದ ಬಗ್ಗೆ ತಗಾದೆ ತೆಗೆದ ದೃಶ್ಯಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕಂಡುಬಂದಿರುತ್ತದೆ.

ಇಷ್ಟರವರೆಗೆ ಸರಕಾರದಿಂದ ಅಧಿಕೃತವಾದ ಬೆಲೆ ಏರಿಕೆಯ ಆದೇಶಗಳು ಬರದಿದ್ದರೂ ಈ ರೀತಿಯ ಹಗಲು ದರೋಡೆ ಮಾಡುವ ಗ್ಯಾಸ್ ಪಂಪುಗಳ ವಿರುದ್ದ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷರಾದ ಇರ್ಫಾನ್ ಕಾನರವರು ಆಗ್ರಹಿಸಿದ್ದಾರೆ.
ಗ್ರಾಹಕರಿಂದ ಹಗಲು ದರೋಡೆ ಮಾಡುವ ಗ್ಯಾಸ್ ಪಂಪುಗಳ ವಿರುದ್ದ ಪ್ರತಿಭಟನೆ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ. ಈ ಹಿಂದೆ ಗ್ಯಾಸ್ ದರ ಪರಿಷ್ಕ್ರತಗೊಂಡರೂ ಹಿಂದಿನ ದರದಂತೆ ಗ್ಯಾಸ್ ವಿತರಿಸಿ ಗ್ರಾಹಕರಿಂದ ಹಣ ಲೂಟಿ ಮಾಡಿ ಹಗಲು ದರೋಡೆ ನಡೆಸಿದ ಹಿನ್ನಲೆ ಇರುವಾಗ ಜಿಲ್ಲಾಧಿಕಾರಿಯವರು ಯಾವುದೇ ಸಂದರ್ಭದಲ್ಲಿ ದರ ಪರಿಷ್ಕರಣೆ ಗೊಂಡರೆ ಸರಕಾರದ ಸುತ್ತೋಲೆಯೊಂದಿಗೆ ಮಾಧ್ಯಮಗಳಲ್ಲಿ ಅಧಿಕೃತ ಪ್ರಕಟಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.


