ಅಪಘಾತದಲ್ಲಿ ಮರಣ ಹೊಂದಿದ ಮೂವರ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಸಹಾಯ ನೀಡಲು ಸರಕಾರಕ್ಕೆ ಸ್ಪೀಕರ್ ಮೂಲಕ ದೀವಾನ್-ಇ-ಖಾಝಿ ಸುನ್ನಿ ಸಂಯುಕ್ತ ಜಮಾತ್ ಕರ್ನಾಟಕ ಮನವಿ

Date:

ಮಂಗಳೂರು: ಮೊಂಟೆಪದವು ನಿವಾಸಿಗಳಾಗಿದ್ದ ಮರಿಕ್ಕಳ ಜಮಾಅತಿಗೆ ಒಳಪಟ್ಟ ಸುನ್ನೀ ಕಾರ್ಯಕರ್ತರಾದ ಇಬ್ರಾಹಿಮ್ ಬಟ್ಯಡ್ಕ . ಅಟೋ ಚಾಲಕ ಮನ್ಸೂರ್ ಮರಿಕ್ಕಳ ಅಬೂಬಕ್ಕರ್ ಮೊಂಟೆಪದವು ಅವರು ಇತ್ತೀಚೆಗೆ ಮಂಗಳೂರಿನ ಪಣಂಬೂರಿನಲ್ಲಿ ನಡೆದ ಅಪಘಾತದಲ್ಲಿ ಮರಣ ಹೊಂದಿದ್ದು ಆ ಕುಟುಂಬದ ಮನೆಗೆ ಸುನ್ನೀ ಸಂಯುಕ್ತ ಜಮಾಅತ್ ಕರ್ನಾಟಕ ಇದರ ನಾಯಕರು ಭೇಟಿ ನೀಡಿ ಸಾಂತ್ವನ ಹೇಳುವ ಮೂಲಕ ವಿಷೇಶ ಪ್ರಾರ್ಥನೆ ನಡೆಸಿದ್ದಾರೆ.

ಅದಾದ ಬಳಿಕ ದಿನಾಂಕ 18.11.2025 ಮಂಗಳವಾರ ಬೆಳಿಗ್ಗೆ ದೀವಾನ್ -ಇ -ಖಾಝಿ ಸುನ್ನಿ ಸಂಯುಕ್ತ ಜಮಾಅತ್ ಕರ್ನಾಟಕ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಹನೀಫ್ ಹಾಜಿ ಉಳ್ಳಾಲ ಪ್ರಧಾನ ಕಾರ್ಯದರ್ಶಿ ಆಶ್ರಫ್ ಸಅದಿ ಮಲ್ಲೂರು ನೇತೃತ್ವದಲ್ಲಿ ಆ ಕುಟುಂಬಕ್ಕೆ ಗರಿಷ್ಠ ಸಹಾಯವನ್ನು ಸರಕಾರ ನೀಡಬೇಕು ಎಂದು ಕರ್ನಾಟಕ ವಿಧಾನ ಸಭಾದ್ಯಕ್ಷರಾದ ಯು.ಟಿ ಖಾದರ್ ರವರನ್ನು ಭೇಟಿ ಮಾಡಿ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಸಿದ್ದೀಖ್ ಸಖಾಫಿ ಮೂಳೂರು,ಬದ್ರುದ್ದೀನ್ ಅಝ್ಹರಿ ಕೈಕಂಬ, ಹೈದರ್ ಅಲಿ ಹಿಮಮಿ ಮಲಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜೂ.28: ಮೂಡಬಿದಿರೆಯಲ್ಲಿ ಇನ್ನರ್ ವ್ಹೀಲ್ ಜಿಲ್ಲಾ 318ರ 57ನೇ ಜಿಲ್ಲಾ ಅಸೆಂಬ್ಲಿ ‘ರೋಶ್ನಿ’ ಕಾಯ೯ಕ್ರಮ

ಮೂಡಬಿದಿರೆ: ಇನ್ನರ್ ವ್ಹೀಲ್ ಜಿಲ್ಲಾ 318ರ 57ನೇ ಜಿಲ್ಲಾ ಅಸೆಂಬ್ಲಿ ‘ರೋಶ್ನಿ’...

ಕಲ್ಲಡ್ಕ: ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಗೆ ಸಂಚಾರಿ ಪೊಲೀಸರಿಂದ ಬ್ರೇಕ್

ಬಂಟ್ವಾಳ: ಕಲ್ಲಡ್ಕ ಪೇಟೆಯ ಸರ್ವಿಸ್ ರಸ್ತೆಯ ಎರಡೂ ಬದಿಗಳಲ್ಲಿ ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್...

ಕಣಚೂರು ಪಬ್ಲಿಕ್ ಸ್ಕೂಲಿನಲ್ಲಿ ವಿದ್ಯಾರ್ಥಿ ನಾಯಕತ್ವ ಪದಗ್ರಹಣ ಸಮಾರಂಭ ಹಾಗೂ 2025–26ನೇ ಸಾಲಿನ CBSE -10ನೇ ತರಗತಿ ಸಾಧಕರ ಸನ್ಮಾನ

ಉಳ್ಳಾಲ: ಕಣಚೂರು ಪಬ್ಲಿಕ್ ಸ್ಕೂಲ್, ದೇರಳಕಟ್ಟೆಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ...