ಗುರುಪುರ–ಕೈಕಂಬ: ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕೈಕಂಬ ಪಟ್ಟಣದಲ್ಲಿ ಪ್ರಸ್ತುತ ನಿರ್ಮಾಣವಾಗುತ್ತಿರುವ ತಡೆಗೋಡೆ ಮಾದರಿಯ ಮೇಲ್ಸೇತುವೆ ಬದಲಾಗಿ, ಪಿಲ್ಲರ್ಗಳ ಮೇಲೆ ಆಧಾರಿತ ತೆರೆದ ಮಾದರಿಯ ಮೇಲ್ಸೇತುವೆಯನ್ನು ಕೈಕಂಬ ಮಾರ್ಕೆಟ್ ವರೆಗೆ ವಿಸ್ತರಿಸಿ ನಿರ್ಮಿಸಬೇಕು ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು, ಕೈಕಂಬ ನಾಗರಿಕ ಹೋರಾಟ ಸಮಿತಿ ವತಿಯಿಂದ ಇಂದಿನಿಂದ (16-02-2026) ಬೆಳಿಗ್ಗೆ 10:00 ಗಂಟೆಗೆ ಕೈಕಂಬ ಜಂಕ್ಷನ್ನಲ್ಲಿ ಧರಣಿ ಆರಂಭಿಸಲಾಗಿದೆ.

ಈ ಧರಣಿ ಫೆಬ್ರವರಿ 19, 2026 ರ ವರೆಗೆ ನಿರಂತರವಾಗಿ ನಡೆಯಲಿದ್ದು, ಸಂಬಂಧಪಟ್ಟ ಅಧಿಕಾರಿಗಳಿಂದ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಲಭಿಸದಿದ್ದಲ್ಲಿ, ಫೆಬ್ರವರಿ 20, 2026 ರಂದು ಬೃಹತ್ ಸಾರ್ವಜನಿಕ ಹಕ್ಕೊತ್ತಾಯ ಸಭೆ ನಡೆಸಲಾಗುವುದು ಎಂದು ನಾಗರಿಕ ಹೋರಾಟ ಸಮಿತಿ ತಿಳಿಸಿದೆ.
ಸ್ಥಳೀಯರ ಅಭಿಪ್ರಾಯದಂತೆ, ಪಿಲ್ಲರ್ಗಳ ಮೇಲೆ ಆಧಾರಿತ ತೆರೆದ ಮೇಲ್ಸೇತುವೆ ನಿರ್ಮಾಣವಾಗದಿದ್ದಲ್ಲಿ ವ್ಯಾಪಾರ ಚಟುವಟಿಕೆಗಳಿಗೆ, ಶಾಲೆ–ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಭಕ್ತಾದಿಗಳಿಗೆ ಗಂಭೀರ ತೊಂದರೆ ಉಂಟಾಗುವ ಸಾಧ್ಯತೆ ಇರುವುದಾಗಿ ಆತಂಕ ವ್ಯಕ್ತಪಡಿಸಲಾಗಿದೆ.

ಕೈಕಂಬ ನಾಗರಿಕ ಹೊರಟ ಸಮಿತಿ ಅಧ್ಯಕ್ಷೆಯಾದ ಶ್ರೀಮತಿ ವಿಜಯ. ಜೆ ಸುವರ್ಣ ಪ್ರಮುಖರಾದ ಸುರೇಶ್ ಬೆಳ್ಚಡ ಅಡ್ಡೂರು, ಅಶ್ರಫ್ ಅಡ್ಡೂರು, ಹರೀಶ್ ಮಟ್ಟಿ, ಗಣೇಶ್ ಶೆಟ್ಟಿಗಾರ್, ಶಾಹಿಕ್ ಅಡ್ಡೂರು,ಅಬ್ದುರಹ್ಮನ್ ಅದ್ದ ಪಂಚಾಯತ್ ಸದಸ್ಯರು,ರೋಷನ್ಡಿ ಕುನ್ಹ, ಜುಲಿಯೇಟ್ ಸೇರವೋ, ವಾಲ್ಟರ್ ಫೆರ್ನಾಂಡಿಸ್, ಲಯನ್ಸ್ ಕ್ಲಬ್ ಅಧ್ಯಕ್ಷ ಜೈಸನ್ ಪಾರಿಸ್, ಅನ್ಸಾರ್ ಪೊಳಲಿ, ಅಝ್ಮಲ್ ಕೈಕಂಬ, ಗುರುಪುರ ಪಂಚಾಯತ್ ಸದಸ್ಯ ಏ.ಕೆ ರಿಯಾಝ್ ಅಡ್ಡೂರು, ಉಪಸ್ಥಿತರಿದ್ದರು.



