ದೇರಳಕಟ್ಟೆ 15:ಮಂಗಳೂರು ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಕಣಚೂರ್ ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ನ
ಮುಖ್ಯ ಆಡಳಿತ ಅಧಿಕಾರಿ ಡಾ ರೋಹನ್ ಎಸ್ ಮೋನಿಸ್ ಅವರು ದ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ನೈಜ ಸ್ವಾತಂತ್ರ್ಯವು ನಾವು ಪ್ರತಿದಿನ ಪರಸ್ಪರರನ್ನು ಗೌರವಿಸುವುದು ಮತ್ತು ಸಣ್ಣ ಕೆಲಸಗಳನ್ನೂ ಅಪಾರ ಪ್ರೀತಿಯಿಂದ ಮಾಡುವುದರಲ್ಲಿ ವ್ಯಕ್ತವಾಗುತ್ತದೆ. ಹೀಗೆ ಮಾಡುವುದರಿಂದಲೇ ನಾವು ಬಲಿಷ್ಠ ಮತ್ತು ಸ್ವತಂತ್ರ ಭಾರತವನ್ನು ಕಟ್ಟಬಲ್ಲೆವು ಎಂದರು.

ಕಾಲೇಜಿನ ಟ್ರಸ್ಟಿ ಹಾಗೂ ಪ್ರವೇಶ ಮತ್ತು ಸಂಪರ್ಕ ನಿರ್ದೇಶಕರಾದ ಡಾ. ಅನಿತಾ ಟಿಟ್ಟೊ ,
ಮಂಗಳೂರು ಕಾಲೇಜ್ ಆಪ್ ಆಲೈಡ್ ಹೆಲ್ತ್ ಸೈನ್ಸ್ ನ
ಪ್ರಾಂಶುಪಾಲರಾದ ಡಾ.ಬೀನಾ ಬೆನಿಟೊ ಡಿಸೋಜ ಮತ್ತು ಮಂಗಳೂರು ಕಾಲೇಜ್ ಆಪ್ ಪಿಸಿಯೋಥರಪಿ ಪ್ರಾಂಶುಪಾಲರಾದ ಡಾ. ಮುಹಮ್ಮದ್ ರಮೀಜ್ ಉಪಸ್ಥಿತರಿದ್ದರು. ಉಪನ್ಯಾಸಕಿ ಅಲೀನಾ ಜೋನ್ ನಿರೂಪಿಸಿ, ಕತೀಜಾತ್ ಸಹ್ಲ ವಂದಿಸಿದರು.


