ದೇರಳಕಟ್ಟೆ: ಮಂಗಳೂರಿನ ಶೈಕ್ಷಣಿಕ ಮತ್ತು ವೈದ್ಯಕೀಯ ಹಬ್ ಎಂದೇ ಖ್ಯಾತಿಯಾಗಿರುವ ದೇರಳಕಟ್ಟೆಯ ಬೆಳ್ಮ ಗ್ರಾಮ ಪಂಚಾಯತ್ ಬಳಿಯ ಆನೆಕಲ್ ಟವರ್ ನಲ್ಲಿ ‘ಮೋರ್ ಸೂಪರ್ಮಾರ್ಕೆಟ್’ ನ ನೂತನ ಮತ್ತು ವಿಸ್ತರಿತ ಮಳಿಗೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಸ್ವೀಕರ್ ಡಾ. ಯು.ಟಿ ಖಾದರ್ ಫರೀದ್ ಮೋರ್ ಸೂಪರ್ಮಾರ್ಕೆಟ್ ನ್ನು ಉದ್ಘಾಟಿಸಿದರು.
ಬೆಳ್ಮ ಗ್ರಾ.ಪಂ ಮಾಜಿ ಅಧ್ಯಕ್ಷರುಗಳಾದ ಯೂಸುಫ್ ಬಾವಾ, ಬಿ.ಎಂ ಸತ್ತಾರ್, ಮಾಜಿ ಅಧ್ಯಕ್ಷೆ ವಿಜಯಕೃಷ್ಣ, ಸದಸ್ಯರಾದ ಇಕ್ಬಾಲ್ ಎಚ್.ಆರ್, ಪುಷ್ಪ ಕಾನೆಕೆರೆ, ಅಬ್ದುಲ್ ರಝಾಕ್, ಅನೆಕಾಲ್ ಟವರ್ ನ ಮಾಲಿಕ ಅಬ್ಬಾಸ್ ಹಾಜಿ ಆನೆಕಲ್, ಮೋರ್ ಸೂಪರ್ಮಾರ್ಕೆಟ್ ನ COO ರಾಜೇಶ್ ನಾಯ್ಡು, ಪ್ರಾದೇಶಿಕ ಕಾರ್ಯಾಚರಣೆ ಮುಖ್ಯಸ್ಥ ಮಲ್ಲಿಕಾರ್ಜುನ ಎಸ್. ಏರಿಯಾ ಮ್ಯಾನೇಜರ್ ಅಯ್ಯಣ್ಣ ಎಂ. ಸಿ., ಬಿ.ಡಿ ಮ್ಯಾನೇಜರ್ ವಿಶ್ವನಾಥ್
ಸ್ಟೋರ್ ಮ್ಯಾನೇಜರ್ ಜಗದೀಶ್ ಉಪಸ್ಥಿತರಿದ್ದರು.

ವಿಶೇಷತೆಗಳೇನು?
ಈ ಹಿಂದೆ ಇದ್ದ ಮಳಿಗೆಗಿಂತ ಇದು ಎರಡು ಪಟ್ಟು ದೊಡ್ಡದಾಗಿದ್ದು, ಗ್ರಾಹಕರಿಗೆ ಮುಕ್ತವಾಗಿ ಓಡಾಡಿ ಶಾಪಿಂಗ್ ಮಾಡಲು ಅವಕಾಶವಿದೆ. ವಿಶಾಲ ಶ್ರೇಣಿ: ತಾಜಾ ತರಕಾರಿ, ಹಣ್ಣುಗಳು, ದಿನಸಿ ಪದಾರ್ಥಗಳು ಹಾಗೂ ಗೃಹೋಪಯೋಗಿ ವಸ್ತುಗಳ ಬೃಹತ್ ಸಂಗ್ರಹ ಇಲ್ಲಿದೆ. ಆಧುನಿಕ ಅನುಭವ: ಸುಧಾರಿತ ಶಾಪಿಂಗ್ ಸ್ಪೇಸ್ ಮತ್ತು ಕ್ಷಿಪ್ರ ಬಿಲ್ಲಿಂಗ್ ಸೌಲಭ್ಯಗಳನ್ನು ಅಳವಡಿಸಲಾಗಿದೆ.


