ಕಾವೂರು: ಪ್ರಚಲಿತ ಚಾರಿಟೇಬಲ್ ಟ್ರಸ್ಟ್ (ರಿ)ಮಂಗಳೂರು ಇದರ ವತಿಯಿಂದ ಮಾದಕ ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮವು ಜ್ಯೋತಿನಗರದಲ್ಲಿ ನಡೆಯಿತು.
ಕಾವೂರು ಪೋಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಬಿರಂದಾರ್ ರವರು ಯುವ ಜನತೆಯು ಮಾದಕ ವಸ್ತುಗಳಿಂದ ದೂರವಿದ್ದರೆ ಉಜ್ವಲ ಭವಿಷ್ಯವನ್ನು ರೂಪಿಸಬಹುದು.ಮಾದಕ ವ್ಯಸನ ಮುಕ್ತ ನಗರವನ್ನು ನಿರ್ಮಿಸುವುದರಲ್ಲಿ ಪ್ರತಿಯೊಬ್ಬರ ಪಾತ್ರ ಬಹಳ ಮುಖ್ಯವಾದದ್ದು ಎಂದು ಹೇಳಿದರು.

ನಿಕಟಪೂರ್ವ ಸದಸ್ಯರು ಮ.ನ.ಪಾ ಶರತ್ ಕುಮಾರ್,ಸಹಾಯಕ ಪ್ರಾಧ್ಯಪಕಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದ ಡಾ.ಅನುರಾಧ ಶೆಟ್ಟಿ,ನಂದಿನಿ ಮಹಿಳಾ ಮಂಡಲ ಕುಂಜತ್ತಬೈಲ್ ನ ಅಧ್ಯಕ್ಷೆ ಗೀತಾ ಶೇಖರ್,ಟ್ರಸ್ಟ್ ನ ಸದಸ್ಯರು ಹಾಗೂ ಸೇವಕ-ಮಹಿಳಾ ಗೃಹ ಕಾರ್ಮಿಕರ ಸಬಲೀಕರಣ ಯೋಜನೆ ಮಂಗಳೂರು ಇದರ ಸದಸ್ಯರು ಉಪಸ್ಥಿತಿಯಿದ್ದರು.

ಪ್ರಚಲಿತ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷೆ ಡಾ.ಸಂಸದ್ ಕುಂಜತ್ತಬೈಲ್ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯ, ಮಂಗಳೂರು ಇದರ ವಿದ್ಯಾರ್ಥಿಗಳು ಮಾದಕ ವ್ಯಸನ ಮುಕ್ತ ಜಾಗೃತಿಯ ಬೀದಿ ನಾಟಕವನ್ನು ಪ್ರದರ್ಶಿಸಿದರು.
ಪ್ರಚಲಿತ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ಹನಿಷ ಸವಾದ್ ನಿರೂಪಿಸಿದರು.ಟ್ರಸ್ಟೀ ಕವಿತಾ ಶ್ರೀರಾಮ್ ಸ್ವಾಗತಿಸಿದರು. ಗ್ಲೇಡ್ಸನ್ ಅರಾನ್ಹಾರವರು ವಂದಿಸಿದರು


