ಉಳ್ಳಾಲ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಯುವಜನ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದೆ ಅದರ ಪರಿಣಾಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ವಿರಾಟ್ ಸ್ವರೂಪ ಪಡೆಯುತ್ತಿದೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಹೇಳಿದರು.

ಅವರು ಕುತ್ತಾರಿನಲ್ಲಿ ಜರಗಿದ ಇಂದು ಉಳ್ಳಾಲ ತಾಲೂಕಿನ ಕುತ್ತಾರು-ಬಟ್ಟೆದಡಿ ಘಟಕಗಳ ಸಮ್ಮೇಳನದ ಪ್ರತಿನಿಧಿ ಅಧಿವೇಶನ ಉದ್ಘಾಟಿಸಿ ಮಾತನಾಡುತ್ತಿದ್ದರು, ಮುಂದುವರಿದು ಮಾತನಾಡಿದ ಅವರು ಜಿಲ್ಲೆಯಲ್ಲಿ ಪ್ರತಿವರ್ಷ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ಸಾಲ ಮಾಡಿ ಪದವಿ ಪಡೆದು ಹೊರಬರುತ್ತಿದ್ದಾರೆ ಆದರೆ ಅವರ ಉದ್ಯೋಗ ಎಲ್ಲಿದೆ ಎಂಬ ಯುವಜನರ ಪ್ರಶ್ನೆಗೆ ಸರಕಾರ ಉತ್ತರಿಸುತ್ತಿಲ್ಲ. ಸರಕಾರದ ಯುವಜನ ವಿರೋಧಿ ನೀತಿ ಮತ್ತು ದೇಶದಲ್ಲಿ ಸೃಷ್ಟಿಸಲು ಸರಕಾರಗಳು ವಿಫಲ ಆಗಿರುವುದರಿಂದ ಇಂದು ಶಾಲಾ ಕಾಲೇಜುಗಳು ನಿರುದ್ಯೋಗಿಗಳ ಸೃಷ್ಟಿಸುವ ಕಾರ್ಖಾನೆಗಳಾಗಿವೆ ಎಂದು ಅವರು ಟೀಕಿಸಿದರು.

ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷರಾದ ನವೀನ್ ಕೊಂಚಾಡಿ, ಉಳ್ಳಾಲ ತಾಲೂಕು ಅಧ್ಯಕ್ಷರಾದ ನ್ಯಾಯವಾದಿ ನಿತಿನ್ ಕುತ್ತಾರ್ ಮಾತನಾಡಿದರು. ಘಟಕ ಅಧ್ಯಕ್ಷರಾದ ಮಿಥುನ್ ರಾಜ್ ಅಧ್ಯಕ್ಷತೆ ವಹಿಸಿದ್ದರು. ಡಿವೈಎಫ್ಐ ಜಿಲ್ಲಾ ಮುಖಂಡರಾದ ಜೀವನ್ ರಾಜ್ ಕುತ್ತಾರ್, ಸುನಿಲ್ ತೆವುಲ, ರಿಜ್ವಾನ್ ಹರೇಕಳ,ತುಷಾರ್ ಕಂಪ ಉಪಸ್ಥಿತರಿದ್ದರು.
ದಿವ್ಯಾರಾಜ್ ಸ್ವಾಗತಿಸಿ, ಕಿಶನ್ ಚಂದ್ರ ವಂದಿಸಿದರೆ,ವಿಕಾಸ್ ಕುತ್ತಾರ್ ಕಾರ್ಯಕ್ರಮ ನಿರೂಪಿಸಿದರು.




