
ವಿಯೆಟ್ನಾಂ: ಜಾನಪದ ಸಂರಕ್ಷಣಾ ಪರಿಷತ್(ರಿ) ಬೆಂಗಳೂರು ಅಯೋಜಿಸಿದ ಅಂತರಾಷ್ಟ್ರೀಯ ಭಾವ- ಜಾನಪದ ಝೇಂಕಾರ ಕಾರ್ಯಕ್ರಮ ಹನೊಐ ವಿಯೆಟ್ನಾಂನ ಮೊಂಗ್ ಗ್ರಾಂಡ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.

ಸಮಾಜ ಸೇವಕ ಟಿ.ವಿ ಬಾಬು ಅಂತರಾಷ್ಟ್ರೀಯ ಭಾವ- ಜಾನಪದ ಝೇಂಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು ಕನ್ನಡಾಂಬೆಯ ಸೇವೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.ಕೋಲಾರದ ನಿವೃತ್ತ ಜಿಲ್ಲಾಧಿಕಾರಿ ಡಾ. ವಿಶ್ವನಾಥ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದರು.ಜಾನಪದ ಸಂರಕ್ಷಣಾ ಪರಿಷತ್(ರಿ) ಅಧ್ಯಕ್ಷ ಗೊನಾಸ್ವಾಮಿ ಸಂಸ್ಥೆಯ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಓಂ ಸಾಯಿ ಆನಂದ ಆಶ್ರಮದ ಜಾನಕಿ.ಎಸ್ , ಸಮಾಜ ಸೇವಕ ಆಂಜನೇಯನ ಈಡಿಗ, ವಿಯೆಟ್ನಾಂನ ಮೊಂಗ್ ಗ್ರಾಂಡ್ ಹೊಟೇಲ್ ನ ಮ್ಯಾನೇಜರ್ ಅಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಬೆಂಗಳೂರಿನ ಅಬಕಾರಿ ಇಲಾಖೆಯ ಅಧಿಕಾರಿ ರಾಜಶೇಖರ್, ಸಮಾಜ ಸೇವಕ ಡಾ. ಪ್ರಹ್ಲಾದ್ ಬೋಯಿ, ಡಾ. ತನುಜಾ ಹಾಸನ, ಸಮಾಜ ಸೇವಕ ರಾಘವೇಂದ್ರ ರವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿತು.ಮಹದೇವ ಸತ್ತಿಗೇರಿ ರವರಿಂದ ಸ್ಟಾಂಡ್ ಅಪ್ ಕಾಮಿಡಿ ನಡೆಯಿತು.ಚನ್ನರಾಯಪಟ್ಟಣದ ನೃತ್ಯಾಂಜಲಿ ಕಲಾ ನಿಕೇತನ ಸಂಸ್ಥೆಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಮಹಿಮಾ ಸಂತೋಷ್ ರೇವನಕರ್ ಭರತನಾಟ್ಯ ನೃತ್ಯಗೈದರು.ಶಿವರಾಜ್ ಪಿ.ಬಿ, ರಾಜಶೇಖರ್, ಹನುಮಂತ ಮಾದರ್, ಮತ್ತಿಕುಂಟೆ ಕೃಷ್ಣ, ದೇವಿ ಶ್ರೀ, ಅನಿತಾ ಕೆ.ಆರ್ ಪೇಟೆ ಜಾನಪದ ಗೀತೆ ಹಾಡಿದರು.





