ಬಂಟ್ವಾಳ: ಇತ್ತೀಚೆಗೆ ನಿಧನರಾದ ಶೈಖುನಾ ತ್ವಾಖಾ ಉಸ್ತಾದ್ ಅವರ ಉತ್ತರಾಧಿಕಾರಿಯಾಗಿ ಕಲ್ಲಡ್ಕ ಜಮಾಅತ್ ಖಾಝಿಯಾಗಿ ಸಮಸ್ತ ಅಧ್ಯಕ್ಷ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯಾ ತಂಙಳ್ ಅವರನ್ನು ಆಯ್ಕೆ ಮಾಡುವ ತೀರ್ಮಾನದ ಅಂಗವಾಗಿ, ಜಮಾಅತ್ ಸಮಿತಿಯ ಪ್ರತಿನಿಧಿಗಳು ತಂಙಳ್ ಅವರನ್ನು ಜಾಮಿಅ ಜಲಾಲಿಯ ಮುಂಡಕುಲಂ ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ತಂಙಳ್ ಅವರು ಜುಲೈ 20 ರಾತ್ರಿ ಸಮಯ 8.30 ಕ್ಕೆ ಮೊಹಿಯುದ್ದಿನ್ ಜುಮಾ ಮಸೀದಿ ಕಲ್ಲಡ್ಕದಲ್ಲಿ ಖಾಝಿ ಸ್ವೀಕಾರ ಮತ್ತು ಉಪನ್ಯಾಸ ನೀಡುವುದಾಗಿಯೂ ತಿಳಿಸಿರುತ್ತಾರೆ.
ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷ ಅಬ್ದುಲ್ಲ ಹಾಜಿ ಕೋಡಿ, ಖತೀಬ್ ಸಯ್ಯಿದ್ ಅಲಿ ಮನ್ನಾನಿ , ಕಾರ್ಯದರ್ಶಿ ಸಿದ್ದೀಕ್ ಪನಾಮ , ಅಲ್ ಬಿರ್ರ್ ಕೋಡಿನೆಟರ್ ಝಕರಿಯಾ ಗೋಳ್ತಮಜಲು ಸದಸ್ಯ ಹಾಜಿ ಇಬ್ರಾಹಿಂ ಸರಪ್ಪಾಡಿ ಉಪಸ್ಥಿತರಿದ್ದರು.


