ತೀರ್ಥಹಳ್ಳಿ ಗೋಪಾಲ ಆಚಾರ್ಯರಿಗೆ ಅರ್ಕುಳ ಪ್ರಶಸ್ತಿ ಪ್ರದಾನ

Date:

ಮೂಡುಬಿದಿರೆ : ಇಲ್ಲಿನ ಅಲಂಗಾರು ಶ್ರೀ ಅಯ್ಯ ಸ್ವಾಮೀ ಮಠದ ಜೀಣೋ೯ದ್ಧಾರದ ಪೂರ್ವಭಾವಿಯಾಗಿ ನಡೆದ ಶ್ರೀ ಗುರು, ಶ್ರೀ ವಿಶ್ವಕರ್ಮ ಯಜ್ಞ, ಮುಷ್ಟಿ ಕಾಣಿಕೆ ಸಮರ್ಪಣ ಕಾರ್ಯಕ್ರಮ ಸಂದರ್ಭದಲ್ಲಿ ಅರ್ಕುಳ ಪ್ರತಿಷ್ಠಾನವು ಶ್ರೀ ಮಠದ ಜೀರ್ಣೋದ್ಧಾರ ಸಮಿತಿ ಸಹಭಾಗಿತ್ವದಲ್ಲಿ ಅಕು೯ಳ ಸುಬ್ರಾಯ ಆಚಾರ್ಯ ಸಂಸ್ಮರಣಾ ಅರ್ಕುಳ ಪ್ರಶಸ್ತಿಯನ್ನು ಯಕ್ಷ ರಂಗದ ಹಿರಿಯ ಕಲಾವಿದ, ತೀಥ೯ಹಳ್ಳಿ ಗೋಪಾಲ ಆಚಾಯ೯ರಿಗೆ ಪ್ರದಾನ ಮಾಡಲಾಯಿತು.

ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು ಕಲೆ, ಅಭಿಮಾನಿಗಳ ಪ್ರೀತಿ, ಕಲಾವಿದರ ಸಂಸರ್ಗ ನನ್ನನ್ನು ಈ ಮಟ್ಟಕ್ಕೆ ಬೆಳೆಸಿವೆ.
ವಯೋ ಸಹಜ ಕಾರಣ ವಹಿಸಿಕೊಂಡ ಪಾತ್ರಕ್ಕೆ ಪೂರ್ಣ ನ್ಯಾಯ ಕೊಡಲಾಗದ ಸ್ಥಿತಿಯಲ್ಲಿ ಕಲಾ ವ್ಯವಸಾಯದಿಂದ ನಿವೃತ್ತಿ ಹೊಂದಿರುವೆನೆಂದರು.

ಸಮಿತಿಯ ಅಧ್ಯಕ್ಷ ಪುರೋಹಿತ ಎನ್.ಕೇಶವ ಆಚಾರ್ಯರ ಅಧ್ಯಕ್ಷತೆ ವಹಿಸಿದ್ದರು.

ಪ್ರತಿಷ್ಠಾನದ ಸಂಚಾಲಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಗೇರುಕಟ್ಟೆ ದಿವಾಕರ ಆಚಾರ್ಯ ಅವರು
ಅಕು೯ಳ ಸುಬ್ರಾಯ ಆಚಾರ್ಯರ ಸಂಸ್ಮರಣೆ ಗೈದರು.

ಶ್ರೀಮಠದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪುರೋಹಿತ ಜಿ.ಎಸ್. ಪುರಂದರ ಆಚಾರ್ಯ ಮುನಿಯಾಲು ಸಮ್ಮಾನ ಪತ್ರ ವಾಚಿಸಿದರು.
ಸಂಘಟಕ ರಾಜೇಶ್ ಪುರೋಹಿತರು, ಪ್ರತಿಷ್ಠಾನದ ಭಾರತಿ ಎಂ.ಎಲ್. ವಾಣಿ ಆಚಾರ್ಯ ಸಹಿತ ಸದಸ್ಯರು ಉಪಸ್ಮಿತರಿದ್ದರು.
ದಿನೇಶ ಶರ್ಮ ಕೊಯ್ಯೂರು ನಿರೂಪಿಸಿ ವಂದಿಸಿದರು.

ಬಳಿಕ ನಡೆದ ‘ಕರ್ಮಬಂಧ’ ತಾಳಮದ್ದಳೆಯಲ್ಲಿ ದೇವರಾಜ ಆಚಾರ್ಯ ಐಕಳ, ಅಶೋಕ -ಯೋಗೀಶ ಆಚಾರ್ಯ ಉಳೆಪಾಡಿ, ಬೇಲಾಡಿ ಜಗದೀಶ, ಹಿರಣ್ಯ ವೆಂಕಟೇಶ, ಗಣೇಶ್ ಕನ್ನಡಿಕಟ್ಟೆ, ಗೇರುಕಟ್ಟೆ ದಿವಾಕರ, ದಿನೇಶ ಶರ್ಮ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...