
ಕುವೈಟ್: ಡಿಕೆಎಸ್ಸಿ ಕುವೈತ್ ರಾಷ್ಟ್ರೀಯ ಸಮಿತಿ ಅಧೀನದಲ್ಲಿ ಫಹಾಹೀಲ್ ಭಾಗದಲ್ಲಿ ನೂತನ ಫಹಾಹೀಲ್ ಯೂನಿಟ್ ಗೆ ಸಯ್ಯದ್ ಅಹ್ಮದ್ ಮುಕ್ತಾರ್ ತಂಗಲ್ ಕುಂಬೋಲ್ ಅವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.
ಮಗ್ರಿಬ್ ಬಳಿಕ ನಡೆದ ಹ್ರಸ್ವ ಕಾರ್ಯಕ್ರಮದಲ್ಲಿ DKSC ಕುವೈತ್ ಇದರ ಗೌರವಾಧ್ಯಕ್ಷರಾದ ಶಫೀಕ್ ಅಹ್ಸನಿ ಸ್ವಾಗತ ಮಾಡಿ DKSC ಬಗ್ಗೆ ವಿವರಣೆ ನೀಡಿದರು, ಕೇಂದ್ರ ಸಮಿತಿ ಸದಸ್ಯರಾದ ಅಬೂಬಕ್ಕರ್ ಹಾಜಿ ಬರ್ವಾ ಉದ್ಘಾಟಿಸಿದರು.
ಸಯ್ಯದ್ ಮುಕ್ತಾರ್ ತಂಗಲ್ ನೂತನ ಸಮಿತಿಯನ್ನು ಘೋಷಿಸಿದರು, ಅಧ್ಯಕ್ಷರಾಗಿ ಅಶ್ರಫ್ ಖಾಸಿಂ ಸಾಬ್ ಗಂಗಾವಳಿ ಹಾಗೂ ಉಪಾಧ್ಯಕ್ಷರಾಗಿ ಯಾಸೀರ್ ಖಾನ, ಜನರಲ್ ಸೆಕ್ರೆಟರಿ ಸಯ್ಯಿದ್ ಯೂಸುಫ್ ಬಿ.ಸಿ ರೋಡ್ ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ರವೂಫ್ ಕೃಷ್ಣಾಪುರ ಮತ್ತು ಹಣಕಾಸು ಕಾರ್ಯದರ್ಶಿ ಅಬ್ದುಲ್ ಹಮೀದ್ ಮೂಳೂರು ಇವರನ್ನು ಆಯ್ಕೆ ಮಾಡಲಾಯಿತು. ರಾಷ್ಟ್ರೀಯ ಕಾರ್ಯದರ್ಶಿ ಲಿಯಾಕತ್ ಗಂಗಾವಳಿ, ಲತೀಫ್ ಶೇಡಿಯ, ಯೂಸುಫ್ ಮುನಿಯಮ್, ರಹ್ಮಾನ್ ಖಾನಾ, ಫೈಸಲ್ ಕಾಪು, ಹನೀಫ್ ನೇಜಾರು, ಶಂಸುದ್ದೀನ್ ಉಚ್ಚಿಲ ,ರಮೀಝ್ ಮೆಹಬೂಲ ಸಹಿತ ಹಲವು ನೇತಾರರು ಉಪಸ್ಥಿತರಿದ್ದರು. ಸಯ್ಯದ್ ರವರ ನಸೀಹತ್ ಮತ್ತು ದುಆ ದಿಂದ ಸಭೆಯು ಧನ್ಯಗೊಂಡಿತ್ತು.
ನೂತನ ಸಮಿತಿ ಅಧ್ಯಕ್ಷರು ವಂದಿಸಿದರು.


