ಬಂಟ್ವಾಳ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಫಲಾನುಭವಿಗಳು ಇ ಕೆ ವೈ ಸಿ ಕಡ್ಡಾಯವಾಗಿ ಮಾಡಬೇಕಾಗಿದೆ ಆದುದರಿಂದ ದಿನಾಂಕ 27.10.2025 ಮತ್ತು 30.10.2025 ರಂದು ಬೋಳಂತೂರು ಗ್ರಾಮ ಪಂಚಾಯತ್ ಕಛೇರಿಯಲ್ಲಿ ಇ ಕೆ ವೈ ಸಿ ಶಿಬಿರ ನಡೆಯಲಿದೆ.

ಉದ್ಯೋಗ ಚೀಟಿದಾರರು ತಮ್ಮ ಆಧಾರ್ ಕಾರ್ಡ್ ಹಾಗೂ ಉದ್ಯೋಗ ಚೀಟಿಯೊಂದಿಗೆ ಗ್ರಾಮ ಪಂಚಾಯಿತಿಗೆ ಬರುವಂತೆ ಈ ಮೂಲಕ ತಿಳಿಸಿದೆ ಇ -ಕೆ ವೈ ಸಿ ಮಾಡಿಸದಿದ್ದಲ್ಲಿ ತಮಗೆ ಉದ್ಯೋಗ ಖಾತರಿ ಯೋಜನೆ ಯಡಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಬ್ಯಾಂಕಿಗೆ ಹಣ ಜಮೆ ಮಾಡಲು ಸಾಧ್ಯವಾಗುವುದಿಲ್ಲ ಆದ್ದರಿಂದ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಚೀಟಿದಾರರು ಬೋಳಂತೂರು ಗ್ರಾಮ ಪಂಚಾಯತ್ ಗೆ ಬಂದು ಇ ಕೆ ವೈ ಸಿ ಮಾಡಿಸಿಕೊಂಡು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ತಿಳಿಸಿದೆ. (30.10.2025) ಕೊನೆಯ ದಿನವಾಗಿರುತ್ತದೆ ತಪ್ಪಿದಲ್ಲಿ ಪಂಚಾಯತ್ ಜವಾಬ್ದಾರರಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.


