ಉಳ್ಳಾಲ: (ಅ.27) : ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೊಕ್ಕೊಟ್ಟಿನ ಶ್ರೀ ಸಾಯಿ ಪರಿವಾರ್ ಟ್ರಸ್ಟ್ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಕುಟುಂಬ ಮಿಲನ ಗೊಂಚಿಲ್ 2025 ಕಾರ್ಯಕ್ರಮ ಪ್ರಕೃತಿ ರಮನೀಯ ಲಿಟಲ್ ಮಂಗಳೂರು ರೆಸಾರ್ಟ್ ನಲ್ಲಿ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಮೂಕಾಂಬಿಕ ಬಿಲ್ಡರ್ಸ್ ನ ಆಡಳಿತ ನಿರ್ದೇಶಕ ಚಂದ್ರಹಾಸ್ ಪಂಡಿತ್ ನೆರವೇರಿಸಿದರು, ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದು, ಅಸ್ತೃ ಗ್ರೂಪ್ ನ ಸಿಇಒ ಲಂಚುಲಾಲ್ ಕೆ.ಎಸ್ ಅಂದದ ಶಾರದೆ ವಿಜೇರಿಗೆ ಬಹುಮಾನ ವಿತರಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಧನಲಕ್ಷ್ಮಿ ಗಟ್ಟಿ, ದ.ಕ ಜಿಲ್ಲಾ ಫೊಟೊಗ್ರಾಫರ್ಸ್ ಎಸೋಸಿಯೇಶನ್ ನ ಕಟ್ಟಡ ಸಮಿತಿ ಅಧ್ಯಕ್ಷ ಆನಂದ ಎನ್ ಕುಂಪಲ, ಪರಿಸರವಾದಿ ಮಾಧವ ಉಳ್ಳಾಲ್, ಸಾಯಿ ಪರಿವಾರ್ ಟ್ರಸ್ಟ್ ನ ಟ್ರಸ್ಟಿಗಳಾದ ಗಣೇಶ್ ಅಂಚನ್, ಗೀತೇಶ್ ಕುತ್ತಾರ್, ಪುರುಷೋತ್ತಮ ಕಲ್ಲಾಪು, ಬುರ್ದುಗೋಳಿ ಕೊರಗಜ್ಜ ಕ್ಷೇತ್ರದ ಕಾರ್ಯದರ್ಶಿ ಪ್ರಶಾಂತ್ ಗಟ್ಟಿ ಕಾಯಂಗಳ ಉಪಸ್ಥಿತರಿದ್ದರು. ಸ್ಥಾಪಕ ಟ್ರಸ್ಟಿ ಪ್ರವೀಣ್ ಎಸ್ ಕುಂಪಲ ಸ್ವಾಗತಿಸಿ, ರಜನೀಶ್ ನಾಯಕ್ ಮತ್ತು ಕೃಷ್ಣ ಪೊನ್ನತ್ತೋಡು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಅಶೋಕ್ ಪೊಳಲಿ ಇವರಿಂದ ವಿಭಿನ್ನ ಶೈಲಿಯ ನೃತ್ಯ, ಸಾಯಿ ಪರಿವಾರ್ ಸೇವಕರಿಂದ ನೃತ್ಯ, ಹಾಸ್ಯ ಮನರಂಜೆ ನಡೆಯಿತು. ಈ ಸಂದರ್ಬದಲ್ಲಿ ರಾಜ್ಯಮಟ್ಟದ ಅಂದದ ಶಾರದೆ ಫೊಟೋ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.



