ಉಳ್ಳಾಲ:ತನ್ನ ಸಂಪೂರ್ಣ ಜೀವನವನ್ನು ಸಮಾಜಸೇವೆ, ಮಾನವೀಯತೆ, ಜನಪರ ಹೋರಾಟ ಮತ್ತು ಜನಸೇವೆಗೆ ಅರ್ಪಿಸಿದ ಜನಸ್ನೇಹಿ ಹಿರಿಯ ನಾಯಕ, ಉಳ್ಳಾಲ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಆರು ಬಾರಿ ನಿರಂತರವಾಗಿ ಸದಸ್ಯರಾಗಿ ಆಯ್ಕೆಯಾದ ಗೌರವಾನ್ವಿತ ಶ್ರೀ ಮೊಹಮ್ಮದ್ ಮುಕ್ಕಚೇರಿ ರವರಿಗೆ 2025-26ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಇವರು ಸದಾ ಜನರ ಹಿತದೃಷ್ಟಿಯಿಂದ ನೇರ ನುಡಿಯ ಮೂಲಕ ಜನರ ಮನ ಗೆದ್ದವರು, ಸರಳತೆ, ಸೌಮ್ಯತೆ ಮತ್ತು ಪ್ರಾಮಾಣಿಕತೆಯ ಮಾದರಿಯ ಮೂಲಕ ಸಮಾಜದಲ್ಲಿ ಸೇವಾಭಾವನೆಗೆ ನಿಜವಾದ ಅರ್ಥ ನೀಡಿದವರು, ಸಹಾನುಭೂತಿಯ ನಿಲುವು, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸದಾ ಶ್ರಮಿಸಿದವರು.
ಉತ್ತಮ ಸಮಾಜ ಸೇವಕ. ಇಷ್ಟು ವರ್ಷಗಳ ಕಾಲ ರಾಜಕೀಯದಲ್ಲಿ ಇದ್ದರೂ ಸಹಾ ಯಾವುದೇ ಕಳಂಕ ಇಲ್ಲದ ವ್ಯಕ್ತಿ. ಸಮಾಜ ಸೇವೆಗೆ ತಮ್ಮ ಜೀವನ ಮುಡಿಪಾಗಿಟ್ಟವರು.
ಈ ಗೌರವ ಅವರ ದೀರ್ಘಕಾಲದ ಸೇವಾ ಮನೋಭಾವಕ್ಕೆ ರಾಜ್ಯದ ಮಾನ್ಯತೆ ದೊರೆತಿದೆ ಎಂಬುದು ನಿಜವಾದ ಸಂತೋಷದ ವಿಷಯ.
ಸೃಷ್ಟಿಕರ್ತನು ಅವರಿಗೆ ಇನ್ನಷ್ಟು ಆಯುಸ್ಸು, ಆರೋಗ್ಯ ಹಾಗೂ ಶಕ್ತಿ ನೀಡಲಿ — ಮುಂದಿನ ದಿನಗಳಲ್ಲೂ ಸಮಾಜಕ್ಕೆ ಸೇವೆ ಸಲ್ಲಿಸಲು ಅವಕಾಶ ದೊರಕಲಿ ಎಂದು ಹಾರೈಕೆಗಳು.


