ಮೂಡುಬಿದಿರೆ : ಸ್ಕೂಟರ್ನಲ್ಲಿ ಹೋಗುತ್ತಿದ್ದ ಯುವಕನ ಮೇಲೆ ಮತ್ತೊಂದು ದ್ವಿಚಕ್ರದಲ್ಲಿ ಹೋಗುತ್ತಿದ್ದ ನಾಲ್ವರ ತಂಡವು ಮಾರಕಾಯುಧದಿಂದ ದಾಳಿ ನಡೆಸಿದ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ಹನುಮಾನ್ ಮಂದಿರದ ಬಳಿ ಇಂದು ಸಂಜೆ ವೇಳೆಗೆ ನಡೆದಿದೆ.

ಮೂಡುಬಿದಿರೆ ತಾಲೂಕಿನ ಇರುವೈಲು ಪೂಪಾಡಿಕಲ್ಲು ನಿವಾಸಿ ವಿಶ್ವನಾಥ ಪೂಜಾರಿ ಅವರ ಪುತ್ರ ಅಖಿಲೇಶ್ (೨೮)
ದುಷ್ಕಮಿ೯ಗಳ ದಾಳಿಗೆ ಒಳಗಾದವ. ಕೈ ಮೊಣಗಂಟಿಗೆ ಗಾಯಗಳಾಗಿದ್ದು ಇದೀಗ ಮೂಡುಬಿದಿರೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಕೂಟಿಯಲ್ಲಿ ತನ್ನ ತಂಗಿಯನ್ನು ಕಾಲೇಜಿನಂದ ಕರೆದು ಬರಲೆಂದು ಹೋದ ಸಂದಭ೯ದಲ್ಲಿ ಘಟನೆ ನಡೆದಿದೆ. ಒಂದೇ ಸ್ಕೂಟಿಯಲ್ಲಿ ನಾಲ್ವರು ಯುವಕರು ಮಾರಾಕಾಯುಧವನ್ನು ಹಿಡಿದು ಝಳಪಿಸುತ್ತಾ ರಸ್ತೆಯಲ್ಲಿ ಹೋಗುತ್ತಿದ್ದಾರೆನ್ನಲಾಗಿದೆ ಈ ಸಂದಭ೯ ಅಖಿಲೇಶ್ ನ ಕೈಗೆ ಕತ್ತಿಯಿಂದ ಬೀಸಿದರೆನ್ನಲಾಗಿದೆ. ನಾಲ್ವರು ದುಷ್ಕಮಿ೯ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ಆರಂಭಿಸಿದರೆನ್ನಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆನ್ನಲಾಗಿದೆ.



