ದುಬೈ: ಡಿಕೆಎಸ್ಸಿ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷರಾದ ಜನಾಬ್ ಅಝೀಝ್ ಮುಳೂರು ರವರು ಯುಎಇ ಸಂದರ್ಶನದಲ್ಲಿದ್ದು, ಇವರಿಗೆ ರಾಷ್ಟ್ರೀಯ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮವು ಬುಧವಾರ ರಾತ್ರಿ ದೇರ ಸಿಟಿ ಅವಿನ್ಯೂ ಟವರ್ ನಲ್ಲಿರುವ ಯೂನಿಕ್ ಟೈಮ್ ಆಫೀಸ್ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಯುಎಇ ರಾಷ್ಟ್ರೀಯ ಸಮಿತಿಯ ಮುಖ್ಯ ಸಲಹೆಗಾರರಾದ ಹಾಜಿ ಎಂ ಇ ಮೂಳೂರು ಉಪಾಧ್ಯಕ್ಷರಾದ ಹಾಜಿ ಯೂಸುಫ್ ಅರ್ಲಪದವು, ಹಾಜಿ ಸುಲೇಮಾನ್ ಮೂಳೂರು, ಫೈನಾನ್ಸ್ ಸೆಕ್ರೆಟರಿ ಹಾಜಿ ಅಬ್ದುಲಾ ಪೆರುವಾಯಿ, ಕಮ್ಯುನಿಕೇಷನ್ ಸೆಕ್ರೆಟರಿ ಜನಾಬ್ ಸಮದ್ ಬೀರಾಲಿ, ಕಾರ್ಯದರ್ಶಿ ಕಮರುದ್ದೀನ್ ಗುರುಪುರ, ದೇರ ಯುನಿಟ್ ಯುನಿಟ್ ಅಧ್ಯಕ್ಷರಾದ ಜನಾಬ್ ಶಕೂರ್ ಮನಿಲ, ಕಾರ್ಯದರ್ಶಿ ಜನಾಬ್ ಸಿದ್ಧೀಕ್ ಉಳ್ಳಾಲ, ಹೋರ್ಲೆಝ್ ಯುನಿಟ್ ಅಧ್ಯಕ್ಷರಾದ ಜನಾಬ್ ಹಮೀದ್ ಸುಳ್ಯ ಹಾಗೂ ಅಬೂಶಗಾರ ಯುನಿಟ್ ಉಪಾಧ್ಯಕ್ಷರಾದ ರಫೀಕ್ ಸತ್ತಿಕ್ಕಲ್ ಉಪಸ್ಥಿತರಿದ್ದರು.


