ಉಳ್ಳಾಲ: ಎಸ್.ಜೆ.ಎಂ. ಹಾಗೂ ಎಸ್.ಎಂ.ಎ. ಇದರ ಜಂಟಿ ಆಶ್ರಯದಲ್ಲಿ ದೇರಳಕಟ್ಟೆ ರೇಂಜ್ ವ್ಯಾಪ್ತಿಯ 16 ಮದ್ರಸಗಳ ಅಧ್ಯಾಪಕರುಗಳಿಗೆ ರಮಳಾನ್ ಕಿಟ್ ಹಾಗೂ ಜಲ್ಸತುಲ್ ವಿದಾಅ ಕಾರ್ಯಕ್ರಮವು ಖುವ್ವತುಲ್ ಇಸ್ಲಾಂ ಮದ್ರಸ ಬದ್ಯಾರ್ನಲ್ಲಿ ನಡೆಯಿತು.

ರೇಂಜ್ ಅಧ್ಯಕ್ಷ ಹನೀಫ್ ಸಅದಿ ಬದ್ಯಾರ್ರವರ ಅಧ್ಯಕ್ಷತೆಯಲ್ಲಿ ಮುಫತ್ತಿಶ್ ಅಬೂಬಕರ್ ಸಿದ್ದೀಖ್ ಮದನಿ ನಾಟೆಕಲ್ ಉದ್ಘಾಟಿಸಿದರು. ಮಹ್ಮೂದುಲ್ ಫೈಝಿ ವಾಲೆಮುಂಡೇವು ಉಸ್ತಾದ್ ವಿದಾಅ ಪ್ರಭಾಷಣ ನಡೆಸಿದರು. ಎಸ್.ಎಂ.ಎ. ದೇರಳಕಟ್ಟೆ ಅಧ್ಯಕ್ಷ ಎಂ.ಕೆ. ಅಬ್ಬಾಸ್ ಉರುಮಣೆ ಶುಭಹಾರೈಸಿದರು. ರೇಂಜ್ ಪ್ರಧಾನ ಕಾರ್ಯದರ್ಶಿ ಹೈದರಲಿ ಹಿಮಮಿ ಮಲಾರ್ ಸ್ವಾಗತಿಸಿದರು.
ಎಸ್.ಎಂ.ಎ. ಕಾರ್ಯದರ್ಶಿ ಹನೀಫ್ ಸಅದಿ ಅಸೈ, ರೇಂಜ್ ಉಪಾಧ್ಯಕರಾದ ಅಬ್ದುಲ್ ಹಮೀದ್ ಸಖಾಫಿ ಕೊಡುಂಗೈ, ಹಾರಿಸ್ ಸಖಾಫಿ ಮೊಂಟುಗೋಳಿ, ಎಸ್.ಎಂ.ಎ. ಕೋಶಾಧಿಕಾರಿ ಅಬ್ದುಲ್ಲತೀಫ್ ಬದ್ಯಾರ್, ಎಸ್.ಎಂ.ಎ. ಜತೆ ಕಾರ್ಯದರ್ಶಿ ಇಸ್ಮಾಈಲ್ ಬೆಳ್ಮದೋಟ, ಸದಸ್ಯರುಗಳಾದ ವಿ.ಎ. ಮುಹಮ್ಮದ್ ಹಮ್ದಾನಿ ಕಿನ್ಯ, ಮೂಸ ಕುಂಞೆ ಕಿನ್ಯ, ಎಸ್.ಜೆ.ಎಂ. ನಾಯಕರಾದ ಅಬ್ದುಲ್ ಅಝೀಝ್ ನೂರಾನಿ, ಮುಹಮ್ಮದ್ ಅಶ್ರಫ್ ಇಂದಾದಿ ಹಾಗೂ ರೇಂಜ್ ವ್ಯಾಪ್ತಿಯ ಎಲ್ಲಾ ಅಧ್ಯಾಪಕರುಗಳು ಉಪಸ್ಥಿತರಿದ್ದರು. ರೇಂಜ್ ಪರೀಕ್ಷಾ ವಿಭಾಗ ಕಾರ್ಯದರ್ಶಿ ಎಂ. ಮುಸ್ತಫಾ ಸಅದಿ ಹರೇಕಳ ಧನ್ಯವಾದವಿತ್ತರು.


