ಹರೇಕಳ, ಫೆ.14: ಎಸ್ಸೆಸ್ಸೆಫ್ ಹರೇಕಳ ಸೆಕ್ಟರ್ ವತಿಯಿಂದ ದೇರಳಕಟ್ಟೆ ಕಣಚೂರ್ ಆಸ್ಪತ್ರೆ ಸಹಯೋಗದೊಂದಿಗೆ ರಕ್ತದಾನ ಶಿಬಿರವು ಮುಹಿಯುದ್ದೀನ್ ಜುಮಾ ಮಸೀದಿ ಬೈತಾರ್ ವಠಾರದಲ್ಲಿ ನಾಳೆ ನಡೆಯಲಿರುವುದು.

ಕಾರ್ಯಕ್ರಮದ ಉದ್ಘಾಟನೆಯನ್ನು ಅಸ್ಸಯ್ಯಿದ್ ಶರಫುದ್ದೀನ್ ತಂಙಳ್ ಫರೀದ್ ನಗರ ನೆರವೇರಿಸಲಿದ್ದಾರೆ. ಸೆಕ್ಟರ್ ಅಧ್ಯಕ್ಷ ಸಲಾಂ ಮಾಸ್ಟರ್ ಹರೇಕಳ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಸ್ಪೀಕರ್ ಯು.ಟಿ.ಖಾದರ್, ತಾ.ಪಂ. ಮಾಜಿ ಸದಸ್ಯ ಮುಸ್ತಫಾ ಮಲಾರ್, ಹರೇಕಳ ಗ್ರಾ.ಪಂ ಉಪಾಧ್ಯಕ್ಷ ಎಂ.ಪಿ. ಮಜೀದ್, ತ್ಯಾಗಂ ಮಾಸ್ಟರ್ ಹರೇಕಳ, ಬದ್ರುದ್ದೀನ್ ಫರೀದ್ ನಗರ ಹಾಗೂ ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.


