ಹರೇಕಳ, ಫೆ.16: ಎಸ್ಸೆಸ್ಸೆಫ್ ಹರೇಕಳ ಸೆಕ್ಟರ್ ವತಿಯಿಂದ ಕಣಚೂರ್ ಆಸ್ಪತ್ರೆ ದೇರಳಕಟ್ಟೆ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವು ಮುಹಿಯುದ್ದೀನ್ ಜುಮಾ ಮಸೀದಿ ಬೈತಾರ್ ವಠಾರದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಕ ತ್ಯಾಗಂ ಸರ್ ಮಾತನಾಡಿ, ಈ ಕಾರ್ಯಕ್ರಮವು ಮಾನವೀಯತೆಯ ಪ್ರತೀಕವಾಗಿದ್ದು, ರಕ್ತದಾನವು ಮಹಾದಾನವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬದ್ರುದ್ದೀನ್ ಫರೀದ್ ನಗರ, ಮಜೀದ್ ಆಲಡ್ಕ, ಮುಸ್ತಫಾ ಮಲಾರ್, ನವಾಝ್ ಸಖಾಫಿ ಅಡ್ಯಾರ್, ಹಾಮಿದ್ ಸಅದಿ ದೇರಿಕಟ್ಟೆ, ಸಮದ್ ಸಖಾಫಿ ಉಪ್ಪಿನಂಗಡಿ, ವೆಂಕಟ್ ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷ ಸಲಾಂ ಮಾಸ್ಟರ್ ಹರೇಕಳ ವಹಿಸಿದ್ದರು. ಸಭೆಯಲ್ಲಿ ಪರಿಸರವಾದಿ ಕೃಷ್ಣಪ್ಪ ಸರ್, ಮುನೀರ್ ಬೈತಾರ್, ಮುಸ್ತಫಾ ತೋಕರಬೆಟ್ಟು, ಅಫ್ರೀದ್ ತೋಕರಬೆಟ್ಟು, ಅನೀಸ್ ಬೈತಾರ್, ಸವಾದ್ ಆಲಡ್ಕ, ಉಬೈದ್ ತೋಕರಬೆಟ್ಟು, ಸುಹೈಲ್ ಆಲಡ್ಕ, ಸುಲ್ತಾನ್ ಕೊಜಪಾಡಿ, ಅಝೀಝ್ ರಾಜಗುಡ್ಡೆ, ಇಬ್ರಾಹಿಂ ದೋಟ, ಉಸ್ಮಾನ್ ಫಜೀರ್, ಉಪಸ್ಥಿತರಿದ್ದರು. ಸಿಮಾಕ್ ಆಲಡ್ಕ ಸ್ವಾಗತಿಸಿ, ಅಬೂಸ್ವಾಲಿಹ್ ಉಂಬುದ ವಂದಿಸಿದರು.


