ಕರ್ನಾಟಕ ಕಲ್ಚರಲ್ ಫೌಂಡೇಶನ್ ಕುವೈಟ್ ವತಿಯಿಂದ ಕೆಸಿಎಫ್ ಫೌಂಡೇಶನ್ ಡೇ ಆಚರಣೆ

Date:

ಕುವೈತ್: ಕೆಸಿಎಫ್ ಕುವೈಟ್ ವತಿಯಿಂದ ಕೆಸಿಎಫ್ ಫೌಂಡೇಶನ್ ಡೇ 2026 ಪೆಬ್ರವರಿ13 ಶುಕ್ರವಾರ ಮಗ್ರಿಬ್ ನಮಾಝ್ ನಂತರ ಸಾಲ್ಮೀಯ ಸುನ್ನಿ ಸೆಂಟರ್ ನಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ನೊಂದಿಗೆ ಆರಂಭವಾಯಿತು.

ಪ್ರಧಾನ ಕಾರ್ಯದರ್ಶಿ ಮುಸ್ತಫ ಉಳ್ಳಾಲ ಸ್ವಾಗತಿಸಿದರು. ಸಂಘಟನಾ ಇಲಾಖೆಯ ಅಧ್ಯಕ್ಷರಾದ ಬಹುಮಾನ್ಯ ಬಾದುಶ ಸಖಾಫಿ ಉದ್ಘಾಟನೆಗೈದರು. ಶಿಕ್ಷಣ ಇಲಾಖೆಯ ಅಧ್ಯಕ್ಷರಾದ ಬಹುಮಾನ್ಯ ಶಾಹುಲ್ ಹಮೀದ್ ಸಅದಿ ಝುಹ್ರಿ ಕೆಸಿಎಫ್ ಡೇ ಬಗ್ಗೆ ವಿವರಿಸಿದರು. ಆಡಳಿತ ಇಲಾಖೆಯ ಅಧ್ಯಕ್ಷರಾದ ಬಹುಮಾನ್ಯ ಫಾರೂಕ್ ಸಖಾಫಿ ರಮಳಾನ್ ತಿಂಗಳ ಬಗ್ಗೆ ತರಗತಿ ನಡೆಸಿದರು. ಕೆಸಿಎಫ್ ಅಂತರರಾಷ್ಟ್ರೀಯ ಆಡಳಿತ ಇಲಾಖೆಯ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಾಡ್ ಸಂಘಟನಾ ಚರ್ಚಾಕೂಟದಲ್ಲಿ ವಿಷಯ ಮಂಡಿಸಿ ಉಪಯುಕ್ತ ಸಲಹೆ ನೀಡಿದರು.

ಕೆಸಿಎಫ್ ಅಂತರರಾಷ್ಟ್ರೀಯ ನಾಯಕರಾದ ಜನಾಬ್ ಝಕರ್ರಿಯ್ಯಾ ಆನೆಕಲ್ ಮತ್ತು ಜನಾಬ್ ಯಾಕೂಬ್ ಕಾರ್ಕಳ ಕಾರ್ಯಕ್ರಮದ ಅವಲೋಕನ ನಡೆಸಿ ವಿಷಯ ಮಂಡಿಸಿದರು. ನೋರ್ತ್ ಝೋನ್ ಅಧ್ಯಕ್ಷರಾದ ಬಹುಮಾನ್ಯ ಕಾಸಿಂ ಉಸ್ತಾದ್ ಬೆಲ್ಮ ಹಾಗೂ ಸೌತ್ ಝೋನ್ ನಾಯಕರಾದ ಜನಾಬ್ ಶಫೀಕ್ ಬೊಂದೆಲ್ ಆಶಂಷ ಕೋರಿದರು.

ಮಹಬುಲ ಸೆಕ್ಟರ್ ಕಾರ್ಯಕರ್ತ ಜನಾಬ್ ಅರ್ಬಾಝ್ ಇಸ್ಲಾಮಿಕ್ ಹಾಡು ಹಾಡಿ ನೆರೆದವರನ್ನು ಮನರಂಜಿಸಿದರು. ವಿಶೇಷ ಅತಿಥಿಯಾಗಿ ಆಗಮಿಸಿದ ಎಸ್.ಎಸ್.ಎಫ್ ರಾಷ್ಟ್ರೀಯ ನಾಯಕರಾದ ಉಬೈದ್ ಸಖಾಫಿ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಅಧ್ಯಕ್ಷರಾದ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿ ಹಿತನುಡಿಗೈದು ದುಆ ನಡೆಸಿಕೊಟ್ಟರು.ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜನಾಬ್ ಅಬ್ಬಾಸ್ ಬಳಂಜೆ ಧನ್ಯವಾದಗೈದರು. ಕೆಸಿಎಫ್ ಡೇ ಪ್ರಯುಕ್ತ ಎರಡು ಝೋನ್ ಗಳಲ್ಲಿ ಕಾರ್ಯಕರ್ತರ ನಡುವೆ ಕ್ರಿಕೆಟ್ ಪಂಧ್ಯಾಟ ನಡೆಸಲಾಗಿತ್ತು. ಕೊನೆಯಲ್ಲಿ ತಬರ್ರುಕ್ ನೀಡಲಾಯಿತು.

ವರದಿ: ಪ್ರಕಾಶನ ಮತ್ತು ಪ್ರಚಾರ ವಿಭಾಗ ಕೆಸಿಎಫ್ ಕುವೈಟ್

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಯುವವಾಹಿನಿ ಮೂಡಬಿದಿರೆ ಘಟಕದ ನೂತನ ಅಧ್ಯಕ್ಷರಾಗಿ ಗಿರೀಶ್ ಕೋಟ್ಯಾನ್ ಮಾರೂರು ಆಯ್ಕೆ

ಮೂಡುಬಿದಿರೆ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ನೂತನ...

ಮೂಡುಮಾನಾ೯ಡು ಪ್ರಾ. ಶಾಲೆಯಲ್ಲಿ ಮೆಟ್ರಿಕ್ ಮೇಳ

ಮೂಡಬಿದಿರೆ: ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡು ಮಾರ್ನಾಡುವಿನಲ್ಲಿ ಮೆಟ್ರಿಕ್...

ಮೂಡಬಿದಿರೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಉದ್ಘಾಟನೆ

ಮೂಡಬಿದಿರೆ: ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಮತ್ತು ನೆರವು ನೀಡುವುದು ಕಾನೂನು...

ಕಲ್ಕಟ್ಟ ಹಸನಬ್ಬ ಹಾಜಿ ವಫಾತಾಗಿ ಹತ್ತು ವರ್ಷ

ದೇರಳಕಟ್ಟೆ: ಪವಿತ್ರ ರಮಳಾನ್ ಮಾಸದಲ್ಲಿ ವಫಾತಾಗುವ ಭಾಗ್ಯ ದೊರೆತ ನಾಡಿನ ಹಿರಿಯ...