ಮಂಗಳೂರು: ಕಾಂಜಾರು ಗ್ರಾಮದ ಪರಾರಿ ಮನೆಯ ನಿವಾಸಿಗಳಾದ ಮೂವರು ಆರೋಪಿಗಳಿಗೆ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಕಾಂಜಾರು ಅಂಚೆ ಮತ್ತು ಗ್ರಾಮದ ದಯಾನಂದ ಹೆಗ್ಡೆಯವರ ಪುತ್ರರಾದ ಜಯಾನಂದ ಹೆಗ್ಡೆ, ಪಿ. ಮಂಜುನಂದ ಹೆಗ್ಡೆ, ಹಾಗೂ ಶೇಖರ್ ಹೆಗ್ಡೆಯವರ ಪುತ್ರ ಚಂದ್ರಹಾಸ ಹೆಗ್ಡೆಯವರ ವಿರುದ್ಧ ಶಿವರಾಜ್ ಶೆಟ್ಟಿ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾದ ಬಳಿಕ, ಜಯಾನಂದ ಹೆಗ್ಡೆ, ಪಿ. ಮಂಜುನಂದ ಹೆಗ್ಡೆ ಮತ್ತು ಚಂದ್ರಹಾಸ ಹೆಗ್ಡೆ ಅವರ ಪರವಾಗಿ ವಕೀಲರಾದ ಮೂಡುಬಿದಿರೆಯ ಶರತ್ ಶೆಟ್ಟಿ ಡಿ. ಅವರು ಉಡುಪಿಯ 2ನೇ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಆರೋಪಿಗಳ ಪರವಾಗಿ ವಕೀಲರಾದ ಶರತ್ ಶೆಟ್ಟಿ ಡಿ. ವಾದ ಮಂಡಿಸಿದ್ದರು.


