ಮಂಗಳೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್ ಪಿ ವೈ ಎಸ್ ಎಸ್) ಕರ್ನಾಟಕ ಪೊಳಲಿ ನಗರದ ಅಶ್ವಥಪುರ ಶ್ರೀ ಸೀತಾರಾಮಚಂದ್ರ ಶಾಖೆಯ ವತಿಯಿಂದ ತೆಂಕಮಿಜಾರು ಪಂಚಾಯತ್ ನ ಸಂತೆಕಟ್ಟೆ ವಿವಿದೋದ್ಧೇಶ ಸಭಾಂಗಣದಲ್ಲಿ ಸಮಿತಿಯ ವಿಶೇಷ ಕಾರ್ಯಕ್ರಮವಾಗಿರುವ ಮಾತೃಧ್ಯಾನ, ಮಾತೃವಂದನಾ, ಮಾತೃಭೋಜನ ಕಾರ್ಯಕ್ರಮ ನಡೆಯಿತು.

ಉಷಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಾವಿತ್ರಿ ಭಾಗವಹಿಸಿದ್ದರು. ಜಿಲ್ಲಾ ಪ್ರಮುಖರು, ನಗರ ಪ್ರಮುಖರ ಉಪಸ್ಥಿತಿಯಲ್ಲಿ ಭಜನೆ, ಆಟೋಟಗಳು, ನಗುವೇ ಯೋಗ ಮುಂತಾದ ಚಟುವಟಿಕೆಗಳನ್ನು ನಡೆಸಲಾಯಿತು. ನಗರದಿಂದ ಸುಮಾರು 350 ಸಂಖ್ಯೆಯಲ್ಲಿ ಯೋಗಬಂಧುಗಳು ಜೋಡಿಸಿಕೊಂಡಿದ್ದರು. ಜಯಶ್ರೀ ಸ್ವಾಗತಿಸಿದರು. ರೇಖಾ ಮಾತೃಧ್ಯಾನದ ಜೊತೆ ಪ್ರಾಸ್ತವಿಕ ಮಾತುಗಳನ್ನಾಡಿದರು. ಲಕ್ಷ್ಮೀ 48 ದಿನಗಳ ಯೋಗ ತರಗತಿಯ ವರದಿಯನ್ನು ಮಂಡಿಸಿದರು. ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.



