ಉದ್ಯಾವರ ದಮ್ಮಾಮ್ ಕಮಿಟಿ 2026ರ ನೂತನ ಪದಾಧಿಕಾರಿಗಳ ಆಯ್ಕೆ:

Date:

ಅಧ್ಯಕ್ಷರಾಗಿ ಹ್ಯಾರಿಸ್ ಕಜ, ಕಾರ್ಯದರ್ಶಿಯಾಗಿ ಸಲಾಮ್ ಸಿಲ್ಸಿಲಾ”

ದಮ್ಮಾಮ್: ಉದ್ಯಾವರ ಮಂಜೇಶ್ವರದ ಅನಿವಾಸಿಗರ ಒಕ್ಕೂಟವಾದ UIEO ಉದ್ಯಾವರ ದಮ್ಮಾಮ್ ಕಮಿಟಿಯ 34ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ದಮ್ಮಾಮಿನ ರೋಸ್ ಆಡಿಟೋರಿಯಂನಲ್ಲಿ ಜರುಗಿತು. 1992ರಿಂದ ಸಮಾಜ ಸೇವೆ ಮತ್ತು ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಈ ಒಕ್ಕೂಟವು, 2026ನೇ ಸಾಲಿನ ನೂತನ ಸಮಿತಿಯನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.


ಅನ್ಸಾರ್ ಮುಕ್ರಿ ಉದ್ಯಾವರ ಅವರ ಕಿರಾಅತ್ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಆಶಿಕ್ ಬಿ.ಎಸ್. ನಗರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಅಶ್ರಫ್ ಬಿ.ಎಸ್. ನಗರ ಮತ್ತು ಅಶ್ರಫ್ ದುಬೈ ಪಾಲ್ಗೊಂಡಿದ್ದರು. ನಝೀರ್ ಶಾಫಿ ಮತ್ತು ಮೊಯಿದಿನ್ ಬೆಳ್ತರಿ ಅವರು ಸಮಾಜ ಸೇವೆಯಲ್ಲಿ ಯುವಕರ ಪಾತ್ರದ ಬಗ್ಗೆ ಮಾರ್ಗದರ್ಶನ ನೀಡಿದರು. ಹ್ಯಾರಿಸ್ ಕಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿಝಾರ್ ಗುಡ್ವೇ ಹಾಗೂ ಫರಾಜ್ ಮಾಹಿನ್ ವಾರ್ಷಿಕ ವರದಿ ಮಂಡಿಸಿದರು. ಫಯಾಜ್ 10’ಮೈಲ್ ವಂದಿಸಿದರು.

2026ರ ನೂತನ ಪದಾಧಿಕಾರಿಗಳು:
ಅಧ್ಯಕ್ಷರು: ಹ್ಯಾರಿಸ್ ಕಜ
ಕಾರ್ಯದರ್ಶಿ: ಸಲಾಮ್ ಸಿಲ್ಸಿಲಾ
ಜಂಟಿ ಕಾರ್ಯದರ್ಶಿಗಳು: ಅನ್ಸಾರ್ ಮುಕ್ರಿ ಮತ್ತು ಆಶಿಕ್ ಬಿ.ಎಸ್. ನಗರ
ಕೋಶಾಧಿಕಾರಿ: ಇಜಾಜ್ ಜುಬೈಲ್
ಮಾರ್ಗದರ್ಶಕರು: ನಝೀರ್ ಶಾಫಿ ಮತ್ತು ಮೊಯಿದಿನ್ ಬೆಳ್ತರಿ

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...