ಮಂಗಳೂರು: ಜುಲೈ : 07: ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಮರ್ಹೂಮ್ ಶೈಖುನಾ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್ ರವರ ಉತ್ತರಾಧಿಕಾರಿಯಾಗಿ ಅಗಾಧ ವಾದ ಧಾರ್ಮಿಕ ಪಾಂಡಿತ್ಯ ಇರುವ ,ಕೋಮು ಸಾಮರಸ್ಯದ ಪ್ರತೀಕ ಮತ್ತು ಹತ್ತು ಹಲವು ಮೊಹಲ್ಲಾ ಗಳ ಖಾಝಿ ಪಟ್ಟ ಅಲಂಕರಿಸಿರುವ ಪಾಣಕ್ಕಾಡ್ ಸಯ್ಯದ್ ನಾಸರ್ ಹಯ್ಯ್ ಶಿಹಾಬ್ ತಂಙಳ್ ರವರನ್ನು ನೇಮಕಾತಿ ಮಾಡಿರುವುದನ್ನು ದಕ್ಷಿಣ ಕನ್ನಡ ಜಿಲ್ಲಾ ಸಮಸ್ತ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಸ್ವಾಗತಿಸಿ, ಈ ನೇಮಕಾತಿ ಮಾಡಿರುವ ಸಂಬಂಧಿತ ಸಮಿತಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿಯೂ ಹಾಗೂ ಸಯ್ಯದ್ ತಂಙಳ್ ರವರಿಗೆ ಎಲ್ಲಾ ರೀತಿಯ ಬೆಂಬಲವನ್ನು ವ್ಯಕ್ತಪಡಿಸಲು ತೀರ್ಮಾನಿಸಲಾಗಿದೆ.
ಇಂದು ಮಂಗಳೂರಿನಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಂ.ಎಚ್.ಮೊಹ್ದೀನ್ ಹಾಜಿ ಅಡ್ಡೂರ್ ರವರ ಅಧ್ಯಕ್ಷತೆಯಲ್ಲಿ ನಡೆದ ಅಸೋಸಿಯೇಷನ್ ನ 40ನೇ ಸಾಮಾನ್ಯ ಸಭೆಯಲ್ಲಿ ಒಕ್ಕೊರಲಿನಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅಸೋಸಿಯೇಷನ್ ನ ಪತ್ರಿಕಾ ಕಾರ್ಯದರ್ಶಿ ಇಬ್ರಾಹಿಮ್ ಕೊಣಾಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.



