ಉಳ್ಳಾಲ : ಶರವು ನಿವಾಸಿ ದಿ.ಜನಾರ್ದನ ಗಟ್ಟಿ, ದಿ.ಗಿರಿಜಾ ಗಟ್ಟಿ ದಂಪತಿ ಪುತ್ರ ಸೋಮೇಶ್ವರ ಪಂಚಾಯತ್ ಮಾಜಿ ಸದಸ್ಯೆ ಶ್ವೇತ ಗಟ್ಟಿ ಇವರ ಪತಿ ಕಿಶೋರ್ ಗಟ್ಟಿ (50) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನ ಹೊಂದಿದರು.

ನಾಳೆ ಬೆಳಿಗ್ಗೆ ಅಂತಿಮ ವಿಧಿ ವಿಧಾನಗಳು ಕುತ್ತಾರು ಮುಂಡೋಳಿ ಮನೆಯಿಂದ ನಡೆಯಲಿದೆ.
ಏನೆಪೋಯ ಸಂಸ್ಥೆಯ ಮಾಜಿ ಉದ್ಯೋಗಿಯಾಗಿದ್ದರು. ಸೋಮೇಶ್ವರ ವಲಯ -1 ಕಾಂಗ್ರೆಸ್ ಅಧ್ಯಕ್ಷರಾಗಿಯೂ , ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದುಕೊಂಡು ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇವರು ಪತ್ನಿ , ಓರ್ವ ಪುತ್ರಿ , ಪುತ್ರನನ್ನು ಅಗಲಿದ್ದಾರೆ .


