ವಿಟ್ಲ: ಕರ್ನಾಟಕ ರಾಜ್ಯಾದ್ಯಂತ ಎಸ್ ಎಂ ಎ ಹಮ್ಮಿಕೊಂಡ ಖೈರು ಉಮ್ಮ ಉತ್ತಮ ಸಮಾಜ ಎಂಬ ಕಾರ್ಯಕ್ರಮದ ಭಾಗವಾಗಿ ಇದೇ ಬರುವ ಜುಲೈ 29ರಂದು ಎಸ್ಎಮ್ಎ ಸೌತ್ ಜಿಲ್ಲಾ ಸಮಿತಿ ವತಿಯಿಂದ ಕಮ್ಯುನಿಟಿ ಕಾನ್ಫರೆನ್ಸ ಬಿಸಿರೋಡು ಲಯನ್ಸ್ ಭವನದಲ್ಲಿ ಬೆಳಿಗ್ಗೆ 9 30 ರಿಂದ ಆರಂಭ ಆಗುವ ಕಾರ್ಯಕ್ರಮ ಮಧ್ಯಾಹ್ನ 12 ಗಂಟೆ ತನಕ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಪ್ರಖ್ಯಾತ ವಾಗ್ಮಿ ಚಿಂತಕ್ಕ ಮೊಹಮ್ಮದ್ ಅಲಿ ಸಖಾಫಿ ವೆಲ್ಲಿಯಡ್ ಕೇರಳ. ಅಸಯ್ಯದ್ ಜಲಾಲುದ್ದೀನ್ ಹಾದಿ ತಂಙಳ್. ಅಸಯ್ಯದ್ ಚಟ್ಟಕ್ಕಲ್ ತಂಙಳ್.ಎಸ್ ಎಂ ಎ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ರಹ್ಮಾನ್ ಮದನಿ ಜಪ್ಪು ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ. ಸ್ವಾಧಿಕ್ ಮಾಸ್ಟರ್ ಮಲಬೆಟ್ಟು ಜಿಲ್ಲಾ ಅಧ್ಯಕ್ಷರಾದ ಯೂಸುಫ್ ಸಾಜ ಹಾಗೂ ಹಲವಾರು ರಾಜ್ಯ ಜಿಲ್ಲಾ ನಾಯಕರು ಭಾಗವಹಿಸಲಿದ್ದಾರೆ. ಆದ್ದರಿಂದ ಪ್ರಸ್ತುತ ಕಾರ್ಯಕ್ರಮದಲ್ಲಿ ಸೌತ್ ಜಿಲ್ಲಾ ವ್ಯಾಪ್ತಿಗೆ ಬರುವ ಮೊಹಲ್ಲ ಅಧ್ಯಕ್ಷರು .ಕಾರ್ಯದರ್ಶಿ ಕೋಶಾಧಿಕಾರಿ ಸ್ಥಳೀಯ ಖತೀಬ್ ಉಸ್ತಾದರು ಭಾಗವಹಿಸಿ ಕಾರ್ಯಕ್ರಮವನ್ನುಯಶಸ್ವಿ ಗೊಳಿಸಲು ಎಸ್ ಎಮ್ ಎ ವಿಟ್ಲ ಝೋನ್ ಸಮಿತಿಅಧ್ಯಕ್ಷರಾದ ಅಬ್ದುಲ್ ರಹಮಾನ್ ಹಾಜಿ ಹಿರಿಯಡ್ಕ, ಪ್ರಧಾನ ಕಾರ್ಯದರ್ಶಿ ಕಾಸಿಂ ಸಖಾಫಿ ಕರೆ ನೀಡಿದ್ದಾರೆ


