
ತೊಕ್ಕೊಟ್ಟು: ಚಿರಾಯು ಆಯುರ್ವೇದ ಪಂಚಕರ್ಮ ಸ್ಪೆಷಾಲಿಟಿ ಕ್ಲಿನಿಕ್ ವತಿಯಿಂದ ನಿನ್ನೆ ಆಯೋಜಿಸಲಾದ ಉಚಿತ ಮಧುಮೇಹ ತಪಾಸಣಾ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು
ಈ ಕಾರ್ಯಕ್ರಮದ ದೀಪ ಬೆಳಗಿಸಿ ಡಾ. ಟೋನಿ ಥಾಮಸ್ M.D ಆಯು ಉದ್ಘಾಟಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು
ಶಿಬಿರದಲ್ಲಿ ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ ಹಾಗೂ ವೈದ್ಯರ ಉಚಿತ ಆರೋಗ್ಯ ಸಲಹೆ ನೀಡಲಾಯಿತು. ಅನೇಕ ನಾಗರಿಕರು ಶಿಬಿರದ ಪ್ರಯೋಜನ ಪಡೆದು ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಹಾಗೂ ಮುಖ್ಯ ಅತಿಥಿಗಳಾಗಿ ಶ್ರೀ ಮೋಹನ ಬಂಗೇರ ಭಟ್ನಗರ ಕೋಶಾಧಿಕಾರಿ ಶ್ರೀ ರುಕ್ಮಯಿ ವಿಠೋಭ ಭಜನ ಮಂಡಳಿ ತೊಕ್ಕೊಟ್ಟು ಸಿರಿಲ್ ರಾಬರ್ಟ್ ಡಿ ಸೋಜ ನಿರ್ದೇಶಕರು ರಿಚಲ್ ಚಾರಿಟೇಬಲ್ ಟ್ರಸ್ಟ್ ಭಟ್ನಗರ ತೊಕ್ಕೊಟ್ಟು;ಸಿಬ್ಬಂದಿ ವರ್ಗ ಹಾಗೂ ಭಾಗವಹಿಸಿದ ಎಲ್ಲರಿಗೂ ಡಾ.ಚಿರಶ್ರಿ ಶೆಟ್ಟಿ ಚಿರಾಯು ಆಯುರ್ವೇದ ಪಂಚಕರ್ಮ ಸ್ಪೆಷಾಲಿಟಿ ಕ್ಲಿನಿಕ್ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಯಿತು. ಇಂತಹ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಮುಂದೆಯೂ ಆಯೋಜಿಸಲಾಗುವುದು ಎಂದು ಕ್ಲಿನಿಕ್ ತಿಳಿಸಿದೆ.


